September 19, 2023

Kannada

Live News Updates ಲೈವ್ ಸುದ್ದಿ ನವೀಕರಣಗಳು

  • ಊಟದ ಜೊತೆಗೆ ತಟ್ಟೆಯನ್ನೂ ತಿನ್ನಬಹುದು; ಗೋಧಿ ಹೊಟ್ಟಿನ ಪ್ಲೇಟ್ ತಯಾರಿಸಿ ಯಶಸ್ಸು ಕಂಡ ಕೇರಳದ ಉದ್ಯಮಿ
    on September 19, 2023 at 11:23 am

    Business Desk: ನಿಮ್ಮ ಊಟದ ತಟ್ಟೆಯಲ್ಲಿ ಬಡಿಸಿಕೊಂಡಿರುವ ಆಹಾರಕ್ಕಿಂತ ಹೆಚ್ಚಿನ ನಾರಿನಾಂಶ ಇದ್ದರೆ ಹೇಗೆ? ಅರೇ, ಪ್ಲೇಟ್ ನಲ್ಲಿ ನಾರಿನಾಂಶ ಇರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕಾಡಬಹುದು. ಕೇರಳ ಮೂಲದ ಥೂಶನ್ ಸಂಸ್ಥೆಯ ಪ್ಲೇಟ್ ಗಳಲ್ಲಿ ಊಟ ಮಾಡಿದವರಿಗೆ 43 ಗ್ರಾಂ ನಾರು ಹಾಗೂ 16 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಇದರಿಂದ ನೀವು ತಿನ್ನೋ ಊಟದಲ್ಲಿ ನಾರಿನಾಂಸ ಕಡಿಮೆಯಿದ್ದರೂ ಅಡ್ಡಿಯಿಲ್ಲ ತಟ್ಟೆಯೇ ಅದನ್ನು ಸರಿದೂಗಿಸುತ್ತದೆ. ಅಷ್ಟೇ ಅಲ್ಲ, ತಟ್ಟೆಗೆ ಹಾಕಿಕೊಂಡ ಊಟದಿಂದ ಹೊಟ್ಟೆ ತುಂಬಿಲ್ಲವೆಂದ್ರೆ ತಟ್ಟೆಯನ್ನೇ ತಿನ್ನಬಹುದು. ಅರೇ, ಇದೇನು ಎಂದು ಹುಬ್ಬೇರಿಸಬೇಡಿ. ಈ ತಟ್ಟೆಗಳನ್ನು ಗೋಧಿ ಹೊಟ್ಟಿನಿಂದ ಸಿದ್ಧಪಡಿಸಲಾಗಿದೆ. ಹೀಗಾಗಿ ಈ ತಟ್ಟೆಯನ್ನು ತಿಂದ್ರೆ ಯಾವುದೇ ತೊಂದರೆಯಿಲ್ಲ. ಸರಳವಾಗಿ ಹೇಳೋದಾದ್ರೆ ಈ ಪ್ಲೇಟ್ ಗಳು ಹೊಟ್ಟೆ ಹಾಗೂ ಪರಿಸರ ಎರಡಕ್ಕೂ ಹಿತಕಾರಿ. ಎರ್ನಾಕುಲಂ ಮೂಲದ ವಿನಯಕುಮಾರ್ ಬಾಲಕೃಷ್ಣನ್ ಇಂಥದೊಂದು ವಿನೂತನ ತಟ್ಟೆ, ಚಮಚಗಳನ್ನು ಸಿದ್ಧಪಡಿಸುವ ಮೂಲಕ ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.  ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ವಿನಯಕುಮಾರ್ ಬಾಲಕೃಷ್ಣನ್ ಕಠಿಣ ಪರಿಶ್ರಮಿ. ಸದಾ ಹೊಸತನಕ್ಕಾಗಿ ತುಡಿಯುವ ಮನಸ್ಥಿತಿ ಹೊಂದಿರೋರು. ಕಳೆದ 55 ವರ್ಷಗಳಲ್ಲಿ ಭೂಗೋಳಶಾಸ್ತ್ರ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ಹಾಗೂ ವಿಮೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನು ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಿದ್ದಾರೆ ಕೂಡ. ಆದರೂ ಹೊಸದಾಗಿ ಏನಾದರೂ ಮಾಡಬೇಕೆಂಬ ತುಡಿತ  ಥೂಶನ್ ಪರಿಸರಸ್ನೇಹಿ ತಟ್ಟೆ, ಚಮಚ ಉತ್ಪಾದನಾ ಸಂಸ್ಥೆಯನ್ನು ಹುಟ್ಟುಹಾಕಲು ಅವರಿಗೆ ಪ್ರೇರಣೆ ನೀಡಿದೆ. ಈ ಉದ್ಯಮ ಪ್ರಾರಂಭಿಸುವ ಮುನ್ನ ವಿನಯಕುಮಾರ್ ಬಾಲಕೃಷ್ಣನ್ ಹಾಗೂ ಅವರ ಪತ್ನಿ ಇಂದಿರಾ ಇಬ್ಬರೂ ಮಾರಿಷನ್ ನಲ್ಲಿ ಉದ್ಯೋಗದಲ್ಲಿದ್ದರು. ಬಾಲಕೃಷ್ಣನ್ ಅವರು ವಿಮಾ ಸಂಸ್ಥೆಯೊಂದರಲ್ಲಿ ಸಿಇಒ ಹುದ್ದೆಯಲ್ಲಿದ್ದರು.  9ನೇ ಕ್ಲಾಸ್‌ ಫೇಲ್‌ ಆದ ವ್ಯಕ್ತಿ ಈಗ 1,843 ಕೋಟಿ ಮೌಲ್ಯದ ಐಸ್‌ಕ್ರೀಂ ಕಂಪನಿಯ ಬಾಸ್‌! ಪೋಲ್ಯಾಂಡ್ ಟ್ರಿಪ್ ನಲ್ಲಿ ಹುಟ್ಟಿದ ಯೋಚನೆ ಪೋಲ್ಯಾಂಡ್  ಟ್ರಿಪ್ ಗೆ ತೆರಳಿದ ಸಂದರ್ಭದಲ್ಲಿ ವಿನಯಕುಮಾರ್ ಈ ವಿನೂತನ ಪರಿಸರಸ್ನೇಹಿ ತಟ್ಟೆಗಳನ್ನು ನೋಡಿದರು. ಸಂಸ್ಥೆಯೊಂದು ಅಲ್ಲಿ ಈ ಮಾದರಿಯ ತಟ್ಟೆಗಳನ್ನು ಸಿದ್ಧಪಡಿಸುತ್ತಿತ್ತು. ಅದನ್ನು ನೋಡಿದ ತಕ್ಷಣ ತಾಯ್ನಾಡಿಗೆ ಹಿಂತಿರುಗಿದ ತಕ್ಷಣ ಅಂಥದ್ದೇ ಸಂಸ್ಥೆ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಇವರಿಗೆ ಪತ್ನಿ ಇಂದಿರಾ ಕೂಡ ಬೆಂಬಲ ನೀಡಿದರು. ಥೂಶನ್ ಎಂಬ ಹೆಸರು ಬಾಳೆ ಎಲೆಗಳಲ್ಲಿ ಕೇರಳದ ಸಾಂಪ್ರದಾಯಿಕ ಊಟವನ್ನು ಬಡಿಸುವ ಪರಿಕಲ್ಪನೆಯಿಂದ ಪ್ರೇರಣೆ ಪಡೆದು ಇಟ್ಟಿರುವ ಹೆಸರಾಗಿದೆ.ಸಿಎಸ್ ಐಆರ್ ನೆರವು ಪಡೆದು ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಈ ಸಂಸ್ಥೆ ಪ್ರತಿದಿನ 1,000 ತಟ್ಟೆಗಳನ್ನು ಉತ್ಪಾದಿಸುತ್ತಿದೆ.  ಗೋಧಿ ಹೊಟ್ಟಿನಿಂದ ಪ್ಲೇಟ್ ಈ ಪ್ಲೇಟ್ ಳನ್ನು ಗೋಧಿ ಹೊಟ್ಟೆನಿಂದ ಸಿದ್ಧಪಡಿಸಲಾಗುತ್ತಿದೆ. ಕೇರಳ ಹಾಗೂ ಹೊರರಾಜ್ಯಗಳಿಂದ ಗೋಧಿ ಹೊಟ್ಟನ್ನು ಖರೀದಿಸಲಾಗುತ್ತಿದೆ. ಕೇರಳದಲ್ಲೇ ಗೋಧಿ ಬೆಳೆ ಕಟಾವು ಬಳಿಕ  7,000 ಟನ್ ಗಳಷ್ಟು ತ್ಯಾಜ್ಯ ಸಿಗುತ್ತದೆ. ಇದರಲ್ಲಿ ಒಂದಿಷ್ಟು ಭಾಗವನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇನ್ನು ಈ ಪ್ಲೇಟ್ ಗಳನ್ನು ಸಿದ್ಧಪಡಿಸುವ ಯಂತ್ರವನ್ನು ಭಾರತದಲ್ಲೇ ತಯಾರಿಸಲಾಗಿದೆ. ಈ ಯಂತ್ರವನ್ನು ಸಿದ್ಧಪಡಿಸಲು ಒಂದೂವರೆ ವರ್ಷ ಹಿಡಿದಿತ್ತು. 2018ರಲ್ಲಿ  ಥೂಶನ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಕ್ಕಿಯಿಂದ ಸ್ಟ್ರಾ ಇನ್ನು ಈ ಸಂಸ್ಥೆ ಅಕ್ಕಿಯಿಂದ ಸ್ಟ್ರಾ ತಯಾರಿಸುತ್ತದೆ. ಈ ಸ್ಟ್ರಾ ಅನ್ನು ಕೂಡ ತಿನ್ನಬಹುದು. ಆಂಧ್ರಪ್ರದೇಶದ ರೈಸ್ ಮಿಲ್ ಗಳಲ್ಲಿ ಉಳಿದಿರುವ ಅಕ್ಕಿ ತುಣುಕುಗಳನ್ನು ಬಳಸಿಕೊಂಡು ಈ ಸ್ಟ್ರಾ ಸಿದ್ಧಪಡಿಸಲಾಗುತ್ತದೆ.  ದೇಶದ ಶ್ರೀಮಂತ ಮಹಿಳಾ ಫ್ಯಾಷನ್ ಡಿಸೈನರ್‌, ಖಾಲಿ 2 ಟೈಲರಿಂಗ್ ಮೆಷಿನ್‌ನಿಂದ 1000 ಕೋಟಿ ರೂ ಸಾಮ್ರಾಜ್ಯಕ್ಕೆ ಒಡತಿ ಒಂದು ಗಂಟೆ ತನಕ ಒದ್ದೆಯಾಗದು ಪ್ಲೇಟ್ ಹಾಗೂ ಸ್ಟ್ರಾಗಳು ಒಂದು ಗಂಟೆ ತನಕ ಒದ್ದೆಯಾಗೋದಿಲ್ಲ. ಹೀಗಾಗಿ ಊಟದ ಸಮಯದಲ್ಲಿ ಸಾರು, ಸಾಂಬಾರನ್ನು ಹೆಚ್ಚು ಬಡಿಸಿಕೊಂಡರೆ ಏಊ ತೊಂದರೆಯಾಗದು ಎನ್ನುತ್ತಾರೆ ವಿನಯಕುಮಾರ್ ಬಾಲಕೃಷ್ಣನ್. ಎರಡು ವಿಧದ ಪ್ಲೇಟ್ ಗಳಿದ್ದು, ಒಂದು ಊಟಕ್ಕೆ ಹಾಗೂ ಇನ್ನೊಂದು ಸೈಡ್ಸ್ ಗೆ. ಊಟಕ್ಕೆ ಬಳಸುವ ತಟ್ಟೆ ದೊಡ್ಡದಾಗಿದ್ದರೆ ಇನ್ನೊಂದು ಚಿಕ್ಕದು. ಇವುಗಳ ಬೆಲೆ 3ರೂ. ನಿಂದ 20ರೂ. ತನಕ ಇದೆ. ಕೇರಳದಲ್ಲಿ ಈ ಸಂಸ್ಥೆ 10 ವಿತರಕರನ್ನು ಹೊಂದಿದೆ.

  • ವಿಘ್ನ ವಿನಾಶಕನ ಹಲವು ರೂಪಗಳು.. ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ
    on September 19, 2023 at 11:13 am

    ಅಪರೂಪ ವಿಘ್ನ ವಿನಾಶಕನ ಈ ರೂಪಗಳು. ಈ ವಕ್ರ ತುಂಡನ ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ. ಭಕ್ತರಿಗೆಲ್ಲ ಒಬ್ಬನೆ ಏಕದಂತ ಆದರೆ ಹಲವು ಅವತಾರ. ದೇವಗಣದ ಪ್ರಧಾನ ಅಧಿಪತಿ ಮಹಾಗಣಪತಿ. ಈ ಗಣಪತಿ ದೇವಲೋಕದಲ್ಲಿ ಹೇಗೆ ಪೂಜಿತನೋ ಹಾಗೇ  ಭೂಲೋಕದಲ್ಲಿ ಪೂಜಿತ. ಗಣಪತಿಯ ಸ್ಮರಣೆಯಿಲ್ಲದೆ ಯಾವುದೇ ಪೂಜೆ ಇರುವುದಿಲ್ಲ. ಈ ಸಡಗರ ಸಂಭ್ರಮ ಗಣೇಶ ಹಬ್ಬ ಮುಗಿಯುವರೆಗೆ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಹಲವು ರೂಪಗಳಲ್ಲಿ ಕಾಣುತ್ತಾನೆ.

  • ತಿನ್ನೋದೇನು ಕಡಿಮೆ ಮಾಡ್ಬೇಕಿಲ್ಲ, ತಿನ್ನೋ ರೀತಿ ಚೇಂಜ್ ಮಾಡ್ಕೊಂಡ್ರೆ ಸಾಕು ತೂಕ ಹೆಚ್ಚಾಗಲ್ಲ
    on September 19, 2023 at 11:06 am

    ತೂಕ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುವ ಸಮಸ್ಯೆ. ಇದ್ರಿಂದ ಹಲವು ಕಾಯಿಲೆಗಳು ಬರೋ ಭಯಾನೂ ಕಾಡುತ್ತದೆ. ಹೀಗಾಗಿ ಹೆಚ್ಚಿನವರು ತೂಕ ಕಡಿಮೆ ಮಾಡ್ಕೊಳ್ಳೋಕೆ ಊಟ ಸ್ಕಿಪ್ ಮಾಡುತ್ತಾರೆ. ಆದ್ರೆ ಹೀಗೆ ಮಾಡದೆಯೇ ತೂಕ ಕಡಿಮೆ ಮಾಡ್ಕೊಬೋದಾ ನಿಮ್ಗೊತ್ತಾ? ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ತೂಕ ಹೆಚ್ಚಳದ ಸಮಸ್ಯೆ ಹಲವರನ್ನು ಕಾಡುತ್ತಿದೆ. ಸಾಲದ್ದಕ್ಕೆ ಕಾಯಿಲೆಗಳು ಸಹ ಸುಲಭವಾಗಿ ವಕ್ಕರಿಸಿಕೊಂಡು ಬಿಡುತ್ತವೆ. ಅಧಿಕ ತೂಕ, ಅತಿಯಾಗಿ ತಿನ್ನುವುದು ಮತ್ತು ಅನಾರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ಆದರೆ ಫುಡ್ಡೀಗಳು ತೂಕ ಕಡಿಮೆಯಾಗಬೇಕೆಂದು ಅಂದುಕೊಂಡರೂ ಕಡಿಮೆ ಫುಡ್ ತಿನ್ನೋದಕ್ಕೆ ಇಷ್ಟಪಡೋದಿಲ್ಲ. ಅಷ್ಟೇ ಅಲ್ಲ ತೂಕ ಕಳೆದುಕೊಳ್ಳೋಕೆ ಕಡಿಮೆ ಫುಡ್ ತಿನ್ನೋದು ಆಯ್ಕೆ ಕೂಡಾ ಅಲ್ಲ. ಹೆಚ್ಚಿನವರು ತೂಕ ಕಡಿಮೆ ಮಾಡ್ಕೊಳ್ಳೋಕೆ ಊಟ ಸ್ಕಿಪ್ ಮಾಡುತ್ತಾರೆ. ಆದ್ರೆ ಹೀಗೆ ಮಾಡದೆಯೇ ತೂಕ ಕಡಿಮೆ ಮಾಡ್ಕೊಬೋದಾ ನಿಮ್ಗೊತ್ತಾ? ಹೈ-ಪ್ರೋಟೀನ್ ಊಟವನ್ನು ಆರಿಸಿಕೊಳ್ಳಿ ತೂಕ ಕಳೆದುಕೊಳ್ಳಬೇಕೆಂದು ಕಡಿಮೆ ತಿನ್ನಲು ಹೋದರೆ ಆರೋಗ್ಯ ಸಮಸ್ಯೆ ಕಾಡೋದು ಖಂಡಿತ. ಹಾಗಾಗಿ ಆ ತಪ್ಪನ್ನು ಎಂದೂ ಮಾಡಬೇಡಿ. ಬದಲಿಗೆ ಹೆಚ್ಚಿನ ಪ್ರೋಟೀನ್ ಆಯ್ಕೆಗಳು ಸಾಮಾನ್ಯವಾಗಿ ಆರೋಗ್ಯಕರವಾಗಿರುತ್ತವೆ ಮತ್ತು ನೀವು ಪೂರ್ಣವಾಗಿರಲು ಸಹಾಯ ಮಾಡುತ್ತದೆ. ಇದು ಆಗಾಗ ಹಸಿವಾಗುವುದನ್ನು ತಡೆಯುತ್ತದೆ. ಕ್ಯಾಲೋರಿ ಕೌಂಟ್ ಗಮನಿಸಿಕೊಳ್ಳಿ ಉದಾಹರಣೆಗೆ, ಅನೇಕ ಬರ್ಗರ್‌ಗಳು 1000 ಕ್ಯಾಲೊರಿಗಳಿಗಿಂತ ಹೆಚ್ಚು ಇರಬಹುದು ಮತ್ತು ನಮಗೆ ತಿಳಿದಿರುವುದಿಲ್ಲ. ಜಂಕ್‌ ಫುಡ್‌ಗಳು ಸಾಮಾನ್ಯವಾಗಿ ಹೆಚ್ಚು ಕ್ಯಾಲೋರಿ ಹೊಂದಿರುತ್ತವೆ. ಇವುಗಳನ್ನು ಅವಾಯ್ಡ್ ಮಾಡಿ. ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಿ. ಸಸ್ಯಾಹಾರ ಹೆಚ್ಚು ತಿನ್ನಿ ಸಸ್ಯಾಹಾರಿಗಳು ಹೆಚ್ಚು ಆರೋಗ್ಯಕರವಾಗಿದೆ. ಏಕೆಂದರೆ ಅವುಗಳು ಫೈಬರ್‌ನಲ್ಲಿ ಅಧಿಕವಾಗಿರುತ್ತವೆ. ಹೆಚ್ಚಿನ ಪ್ರೊಟೀನ್‌, ವಿಟಮಿನ್‌, ಫೈಬರ್‌ ಮೊದಲಾದ ಅಂಶಗಳನ್ನು ಹೊಂದಿರುತ್ತದೆ. ಕಾಯಿಲೆಗಳು ಬರುವುದು ತಡೆಯುತ್ತದೆ. ವ್ಯಾಯಾಮ ಮಾಡಿ ತೂಕವನ್ನು ಕಡಿಮೆ ಮಾಡಲು ಬಯಸಿದರೆ ಆರೋಗ್ಯಕರವಾಗಿ ತಿನ್ನುವುದರ ಜೊತೆಗೆ ಆಗಾಗ ವ್ಯಾಯಾಮ ಮಾಡುವ ಅಭ್ಯಾಸ ಇರಬೇಕು. ಕೆಲವರು, ಊಟದ ನಿರ್ಧಾರಗಳನ್ನು ಮಾಡುವಾಗ, ವಿಶೇಷವಾಗಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವಾಗ ಮಿತವಾಗಿರುವುದು ಇನ್ನೂ ಅಗತ್ಯ ಎಂಬುದನ್ನು ಮರೆತು ಬಿಡುತ್ತಾರೆ. ಅಗತ್ಯವಿದ್ದಷ್ಟೇ ನಿದ್ದೆ ಮಾಡಿ ಆರೋಗ್ಯ ಚೆನ್ನಾಗಿರಲು ನಿದ್ದೆ ಅತೀ ಅಗತ್ಯ. ಆದರೆ ಅತಿಯಾದ ನಿದ್ದೆಯೂ ಆರೋಗ್ಯಕ್ಕೆ ಹಾನಿಕರ. ಇದು ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಹೀಗಾಗಿ ದಿನಕ್ಕೆ ಕೇವಲ 7ರಿಂದ 8 ಗಂಟೆಯ ತನಕದ ನಿದ್ದೆಯಷ್ಟೇ ದೇಹಕ್ಕೆ ಸಾಕಾಗುತ್ತದೆ. ಹಗಲು ಮಲಗುವ ಅಭ್ಯಾಸವೂ ಆರೋಗ್ಯಕ್ಕೆ ಒಳ್ಳೆಯದಲ್ಲ.

  • ಗಣೇಶ ಹಬ್ಬದಂದು ಸರ್ಜಾ ಕುಟುಂಬ ಸೇರಿದ ಜ್ಯೂನಿಯರ್ ಧ್ರುವ; ಹೇಗಿದ್ದಾನೆ ಗೊತ್ತಾ?
    on September 19, 2023 at 11:02 am

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಗೌರಿ ಗಣೇಶ ಹಬ್ಬದಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ. ಮಗು ಹೇಗಿದ್ದಾನೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ. ಪ್ರೇರಣಾ ಅವರಿಗೆ ನಾರ್ಮಲ್ ಡೆಲಿವರಿ ಆಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಧ್ರುವ ಹೇಳಿದ್ದಾರೆ.  ಪ್ರೀತ್ಸೆ ಅಂತ ಕ್ರಿಶ್ಚಿಯನ್ ಹುಡ್ಗಿ ಹಿಂದೆ ಬಿದ್ದ ಧನಂಜಯ್; ಸಾಥ್‌ ಕೊಟ್ಟ ಶಿವಣ್ಣ!

  • ಮೈಸೂರು ಅರಮನೆಯಲ್ಲಿ ಸಂಭ್ರಮದ ಸ್ವರ್ಣಗೌರಿ, ಶ್ರೀ ವರಸಿದ್ಧಿ ವಿನಾಯಕ ವ್ರತ ಆಚರಣೆ!
    on September 19, 2023 at 11:00 am

    ಮೈಸೂರು ಅರಮನೆಯಲ್ಲಿ ಸಂಭ್ರಮದ ಗಣೇಶೋತ್ಸವ ನಡೆದಿದ್ದು, ಮಹಾರಾಜ ಯದುವೀರ್ ಕೃಷ್ಣರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಪೂಜೆ ನೆರವೇರಿಸಿದ್ದರು.    ದೇಶದೆಲ್ಲೆಡೆ ಇಂದು ಸಂಭ್ರಮದ ಗಣೇಶೋತ್ಸವ (Ganeshotsav) ನಡೆಯುತ್ತಿದ್ದು, ಗಣೇಶನನ್ನು ಕೂರಿಸಿ ಅಥವ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಶಾಸ್ತ್ರೋಸ್ತಕವಾಗಿ ಪೂಜೆ ಮಾಡಲಾಗುತ್ತದೆ. ಮೈಸೂರು ಅರಮನೆಯಲ್ಲೂ ಈ ಪೂಜೆ ಸಂಭ್ರಮದಿಂದ ನಡೆಯುತ್ತದೆ.    ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ (Yaduveer Krishnadatta Chamaraj Wadedyar) ಮತ್ತು ಮಹಾರಾಣಿ ತ್ರಿಷಿಕಾ ರಾಣಿ ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.  ಈ ಸಂದರ್ಭದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ.    ಮಹಾರಾಜ ಯದುವೀರ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಅರಮನೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಶ್ರೀ ಸ್ವರ್ಣಗೌರಿ ಹಾಗು ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಮೈಸೂರು ಅರಮನೆಯಲ್ಲಿ ಆಚರಿಸಲಾಯಿತು ಎಂದು ಬರೆದುಕೊಂಡಿದ್ದಾರೆ.    ರಾಜ್ಯದ ಜನರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭ ಕೋರಿದ ರಾಜರೂ ಶ್ರೀ ಅಮ್ಮನವರು ಹಾಗು ಶ್ರೀ ಸ್ವಾಮಿಯವರು ಎಲ್ಲರಿಗೂ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸಲಾಯಿತು ಎಂದು ಬರೆದುಕೊಂಡಿದ್ದಾರೆ.    ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ (Dasara festival) ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಮನೆಯ ಮುಂಭಾಗದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.    ಮೈಸೂರು ಅರಮನೆಯಲ್ಲಿ ನಡೆಯುವ ವೈಭವದ ಗಣೇಶೋತ್ಸವ ನೋಡುವುದೇ ಚಂದ, ಗಣೇಶ ಚತುರ್ಥಿಯ (Ganesha Chathurthi) ಸಮಯದಲ್ಲಿ ಮೈಸೂರು ಅರಮನೆ ಗಣಪತಿ ಪೆಂಡಾಲ್ ಅನ್ನು ಆಯೋಜಿಸುತ್ತದೆ. ಅರಮನೆಯಲ್ಲಿ ಗಣೇಶೋತ್ಸವವು ಶ್ರೀಮಂತಿಕೆಯ ಪ್ರತೀಕವಾಗಿದೆ.    ಮಹಾರಾಣಿ ತ್ರಿಷಿಕಾ ಸ್ವರ್ಣ ಗೌರಿ ವೃತವನ್ನು ಕೈಗೊಂಡು, ಪೂಜೆ ನೆರವೇರಿಸಿದರು. ಅಲ್ಲದೇ ಅವರು ಮಹಿಳೆಯರಿಗೆ ಬಾಗಿಣ ನೀಡಿದರು. ಅರಮನೆಯ ಗಣೇಶೋತ್ಸವದ ಸಂಭ್ರಮವನ್ನ ಕಣ್ತುಂಬಿಕೊಂಡ ಜನರು ಸಂತಸ ವ್ಯಕ್ತಪಡಿಸಿದ್ದಾರೆ.   

  • ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾದ ಮೋದಿ, ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿದ ಪ್ರಧಾನಿ!
    on September 19, 2023 at 10:59 am

    ನವದೆಹಲಿ(ಸೆ.19) ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡಿದ್ದಾರೆ. ಇದೇ ವೇಳೆ ಐತಿಹಾಸಿಕ ಮಹಿಳಾ ಮೀಸಲಾತಿ ಬಿಲ್ ಮಂಡನೆ ಮಾಡಿದ್ದಾರೆ. ಇಂದು ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲು ಪ್ರಧಾನಿ ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿಕೊಂಡಿದ್ದಾರೆ. ಇದೀಗ ನರೇಂದ್ರ ಮೋದಿ ಗ್ರೂಪ್ ಚಾನೆಲ್ ಆರಂಭಗೊಂಡಿದೆ. ಈ ಮೂಲಕ ಜನಸಾಮಾನ್ಯರ ಜೊತೆ ಸಂವನ, ಯೋಜನೆ, ಸರ್ಕಾರ ಘೋಷಣೆಗಳ ಮಾಹಿತಿ ನೇರವಾಗಿ ಪ್ರಧಾನಿ ಮೋದಿಯಿಂದ ಜನರಿಗೆ ತಲುಪಲಿದೆ. ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಗ್ರೂಪ್ ಚಾನೆಲ್ ಫೀಚರ್ ಆರಂಭಿಸಿತ್ತು. ಇದೀಗ ಮೋದಿ ಕೂಡ ಈ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿಕೊಂಡಿದ್ದಾರೆ. ಈ ಕುರಿತು ತಮ್ಮ ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಾನು ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಇದು ಜನಸಾಮಾನ್ಯರ ಜೊತೆ ಮತ್ತಷ್ಟು ಹತ್ತಿರವಾಗಿ ಸಂವನಹ ನಡೆಸಲು ಮತ್ತೊಂದು ಹೆಜ್ಜೆಯಾಗಿದೆ. ಇನ್ನು ನಾವೆಲ್ಲ ಸಂಪರ್ಕದಲ್ಲಿರೋಣ. ಇಲ್ಲಿ ಹೊಸ ಸಂಸತ್ ಭವನದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಮೋದಿ ಮೊದಲ ಸಂದೇಶ ಹಂಚಿಕೊಂಡಿದ್ದಾರೆ. ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ! ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಗ್ರೂಪ್ ಚಾನೆಲ್ ನೀವು ಸೇರಿಕೊಳ್ಳುವುದು ಹೇಗೆ? ಜನಸಾಮಾನ್ಯರ ಜೊತೆ ಸಂವಹನ ನಡೆಸಲು ಪ್ರಧಾನಿ ಮೋದಿ ಇದೀಗ ಹೊಸ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ತೆರೆದಿದ್ದಾರೆ. ವ್ಯಾಟ್ಸ್ಆ್ಯಪ್ ಬಳಕೆದಾರರು ನರೇಂದ್ರ ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಸೇರಿಕೊಳ್ಳಲು ಸಾಧ್ಯವಿದೆ.  ಮೋದಿ ಕಮ್ಯೂನಿಟಿ ಚಾನೆಲ್ ಗ್ರೂಪ್ ಭಾಗವಾಗಲು ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಬುಹುದು. ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ಸೇರಲು ನೀಡಿರುವ ಲಿಂಕ್ ಇಲ್ಲಿದೆ https://whatsapp.com/channel/0029Va8IaebCMY0C8oOkQT1F ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ! ಪ್ರಧಾನಿ ಮೋದಿ ಹೊಸ ಹೆಜ್ಜೆ ದೇಶದ ಜನರಲ್ಲಿ ಅತೀವ ಸಂತಸ ತಂದಿದೆ. ಮೋದಿ ಜೊತೆಗೆ ನೇರ ಸಂಪರ್ಕದಲ್ಲಿಲು ಸಾಧ್ಯವಿದೆ. ಇದು ಕಮ್ಯೂನಿಟಿ ಚಾನೆಲ್ ಆಗಿದ್ದು, ಈ ಗ್ರೂಪ್ ಸದಸ್ಯರ ಮಾಹಿತಿ ಗೌಪ್ಯವಾಗಿರಲಿದೆ. ಯಾರು ಈ ಗ್ರೂಪ್ ಫಾಲೋ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ಲಭ್ಯವಾಗುವುದಿಲ್ಲ. ಇನ್ನು ಗ್ರೂಪ್ ಆಡ್ಮಿನ್‌ಗೆ ಮಾತ್ರ ಇಲ್ಲಿ ಮಾಹಿತಿ ಫಾರ್ವರ್ಡ್ ಮಾಡಲು ಹಾಗೂ ಫೋಟೋ, ವಿಡಿಯೋಗಳನ್ನು ಕಳುಹಿಸಲು ಅವಕಾಶವಿರುತ್ತದೆ. ಇದು ವ್ಯಾಟ್ಸ್ಆ್ಯಪ್ ಹೊಸ ಫೀಚರ್ ನಿಯಮವಾಗಿದೆ.    ವಾಟ್ಸಾಪ್‌ ಚಾನೆಲ್ಸ್‌ನಲ್ಲಿ ನರೇಂದ್ರ ಮೋದಿ, ಹೊಸ ಸಂಸತ್ ಭವನದ ಕಚೇರಿ ಫೋಟೋ ಹಂಚಿಕೊಂಡ ನಮೋ, ನಮ್ಮ ನಿರಂತರ ಸಂವಾದಗಳ ಪ್ರಯಾಣದಲ್ಲಿ ಇನ್ನೂ ಒಂದು ಹೆಜ್ಜೆ ಹತ್ತಿರವಾಗಿದ್ದೇನೆ, ಸಂಪರ್ಕದಲ್ಲಿರೋಣ ಎಂದ ಪ್ರಧಾನಿ! #NarendraModi #WhatsAppChannels #NewParliamentBuilding #NaMo @narendramodi @PMOIndia pic.twitter.com/OahtGeTXuk — Asianet Suvarna News (@AsianetNewsSN) September 19, 2023  

  • ಧ್ರುವ ಸರ್ಜಾ ಮಗುವಿಗೆ ಗಜಕೇಸರಿ ಯೋಗ; ಮಹಾನ್ ನಟನಾಗ್ತಾನ ಸ್ಟಾರ್ ಆಕ್ಟರ್ ಪುತ್ರ?
    on September 19, 2023 at 10:57 am

    ಧ್ರುವ ಸರ್ಜಾ ಪ್ರೇರಣಾ ದಂಪತಿಗೆ ಚೌತಿ ಹಬ್ಬದಂದು ಮಗ ಹುಟ್ಟಿದ್ದಾನೆ. ಈಗಾಗಲೇ ಈ ದಂಪತಿಗೆ ಹೆಣ್ಣು ಮಗುವಿದ್ದು ಆ ಮಗುವಿಗೆ ಇನ್ನೂ ಎರಡು ವರ್ಷ ತುಂಬುವ ಮೊದಲೇ ಮತ್ತೊಂದು ಮಗುವಿನ ಆಗಮನವಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಧ್ರುವ ಸರ್ಜಾ-ಪ್ರೇರಣಾ ದಂಪತಿಯ ಮತ್ತೊಂದು ಮಗು ಜನಿಸಿರುವುದು ಕುಟುಂಬಕ್ಕೆ ಖುಷಿ ನೀಡಿದೆ. ಮಗುವನ್ನು ನೋಡಲು ಮೇಘನಾ ರಾಜ್​, ಸುಂದರ್​ ರಾಜ್​ ಮುಂತಾದವರು ಆಗಮಿಸಿದ್ದಾರೆ. ‘ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್​ ಹೇಳಿದ್ದಾರೆ. ಅವರು ಹೇಳಿದ ಇನ್ನೊಂದು ಮಾತು ಹಲವು ಮಂದಿ ಅಚ್ಚರಿ, ಖುಷಿ ಅನುಭವಿಸುವಂತೆ ಮಾಡಿದೆ. ಹೌದು. ‘ಈಗಾಗಲೇ ಅವರ ಮನೆಗೆ ಗೌರಿ ಬಂದಾಯಿತು. ಈಗ ಗಣೇಶ ಬಂದಿದ್ದಾನೆ. ಯಾವುದೇ ಹೊಸ ಪರ್ವ ಬಂದಾಗ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಈ ಮಗು ಗಜಕೇಸರಿ ಯೋಗದಲ್ಲಿ ಹುಟ್ಟಿದೆ. ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ಇದನ್ನು ನಾವು ನಿರೀಕ್ಷಿಸಿದ್ದೆವು. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್ ಹೇಳಿದ್ದಾರೆ. ದಿಸ್ ಈಸ್ ನಾಟ್ AI ವರ್ಲ್ಡ್, ದಿಸ್ ಈಸ್ UI ವರ್ಲ್ಡ್: ಕತ್ತಲುಮಯ ಟೀಸರ್ ಮೂಲಕ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಉಪೇಂದ್ರ! ಅಷ್ಟಕ್ಕೂ ಈ ಗಜಕೇಸರಿ ಯೋಗವೆಂದರೆ ಸಾಧಾರಣ ಯೋಗವಲ್ಲ. ಇದೊಂದು ರಾಜಯೋಗ. ಕೆಲವರಿಗೆ ಹುಟ್ಟಿಂದ ಸಾಯೋ ತನಕ ಇರುತ್ತದೆ. ಇನ್ನು ಕೆಲವರಿಗೆ ಬದುಕಿನಲ್ಲಿ ಒಮ್ಮೆ ಬರುತ್ತದೆ. ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಒಂದು, ನಾಲ್ಕು, ಏಳು ಮತ್ತು ಹತ್ತರಲ್ಲಿ ಚಂದ್ರ ಮತ್ತು ಗುರು ಇವರಿಬ್ಬರೂ ಒಟ್ಟಿಗೇ ಇದ್ದರೆ ಗಜಕೇಸರೀ ಯೋಗ ಸಂಭವಿಸುತ್ತದೆ. ಅಷ್ಟೇ ಅಲ್ಲದೇ ಲಗ್ನದಿಂದ ಒಂದು, ನಾಲ್ಕು, ಏಳು‌ ಮತ್ತು ಹತ್ತರಲ್ಲಿ ಚಂದ್ರ ಹಾಗೂ ಗುರುವು ಇದ್ದರೂ ಗಜಕೇಸರೀ ಯೋಗವು ಆಗುತ್ತದೆ. ಹಾಗಯೇ ಚಂದ್ರನಿಂದಲೂ ಈ ಯೋಗವನ್ನು ಹೇಳುತ್ತಾರೆ. ಚಂದ್ರನಿಂದ ಒಂದು, ನಾಲ್ಕು, ಏಳು, ಹತ್ತರಲ್ಲಿ ಗುರುವಿದ್ದರೆ ಅಥವಾ ಚಂದ್ರನ‌ ದೃಷ್ಟಿಯು ಗುರುವಿನ ಮೇಲೆ ಬಿದ್ದರೆ ಗಜಕೇಸರೀ ಯೋಗವು ಆಗುವುದು. ರೂಪವಂತರಾಗುತ್ತಾರೆ, ಧನವಂತರಾಗುವರು, ಬುದ್ಧಿಯ ಪ್ರಖರತೆ ಹೆಚ್ಚಾಗುವುದು, ಗುಣವಂತರಾಗುವರು, ರಾಜರಿಗೆ ಪ್ರಿಯರಾದವರು ಆಗುವರು, ಮಾತಿನಲ್ಲಿ ಪ್ರೌಢಿಮೆ ಇರಲಿದೆ. ಸಭೆಯಲ್ಲಿ ಗಾಂಭೀರ್ಯ ಬರುವುದು, ದೀರ್ಘಾಯುಸ್ಸನ್ನು ಹೊಂದಿದವನು ಆಗುತ್ತಾನೆ. ಸಾಮಾಜಿಕ ಮನ್ನಣೆ, ಸಂಪತ್ತು, ಅಧಿಕಾರ ಎಲ್ಲವೂ ಅವನ ಯೋಗ್ಯತೆ ಅನುಸಾರವಾಗಿ ಸಿಗುತ್ತಾ ಹೋಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗವು ಎರಡನೇ ಮನೆಯಲ್ಲಿದ್ದರೆ ಅಂತಹವರು ಉನ್ನತ ಕುಟುಂಬದಲ್ಲಿ ಜನಿಸುತ್ತಾರೆ. ಇಂತಹವರ ಮಾತುಗಳನ್ನು ಜನ ಬಹಳ ಎಚ್ಚರಿಕೆಯಿಂದ ಕೇಳುತ್ತಾರೆ. ಅಲ್ಲದೆ, ಅವರಿಗೆ ಜೀವನದಲ್ಲಿ ಹಣದ ಕೊರತೆಯಾಗದು. ಜಾತಕದಲ್ಲಿ ಎರಡನೇ ಮನೆಯಲ್ಲಿ ಗಜಕೇಸರಿ ಯೋಗ ಇರುವವರು ನುರಿತ ಭಾಷಣಕಾರರಾಗುತ್ತಾರೆ. ಗುರು ಧರ್ಮದ ಕಾರಕ ಗ್ರಹ, ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನೀವು ಧರ್ಮಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾಷಣಕಾರರು ಆಗಬಹುದು. ಒಬ್ಬ ವ್ಯಕ್ತಿಯ ಹತ್ತನೇ ಮನೆಯಲ್ಲಿ ಗಜಕೇಸರಿ ಯೋಗವು ರೂಪುಗೊಂಡರೆ, ಅದು ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಅದೇ ಸಮಯದಲ್ಲಿ, ಇದು ಅವರ ತಂದೆಗೆ ತುಂಬಾ ಒಳ್ಳೆಯದು. ಈ ಯೋಗದ ಪ್ರಭಾವದಿಂದ ವ್ಯಕ್ತಿಯ ತಂದೆಯೂ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ವ್ಯಕ್ತಿ ಅದೃಷ್ಟಕ್ಕಿಂತ ಕರ್ಮಕ್ಕೆ ಪ್ರಾಮುಖ್ಯತೆ ನೀಡುತ್ತಾನೆ. ಇದರೊಂದಿಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ. ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ ಒಂದು ಸಾಮಾನ್ಯ ನಂಬಿಕೆ ಎಂದರೆ ಒಬ್ಬ ವ್ಯಕ್ತಿಯ ಮೊದಲ ಲಗ್ನದಲ್ಲಿ ಗಜಕೇಸರಿ ಯೋಗವು ರೂಪುಗೊಂಡರೆ, ಆ ವ್ಯಕ್ತಿ ನಾಯಕ ಅಥವಾ ನಟನಾಗುತ್ತಾನೆ. ಅಂತಹ ವ್ಯಕ್ತಿಯನ್ನು ನೋಡಲು ಜನರು ತುಂಬಾ ಉತ್ಸುಕರಾಗಿರುತ್ತಾರೆ. ಅಲ್ಲದೆ ಅವರ ಜೀವನಶೈಲಿ ರಾಜರಂತೆಯೇ ಇರುತ್ತದೆ. ಅಷ್ಟೇ ಅಲ್ಲ, ಈ ಯೋಗದ ಪ್ರಭಾವದಿಂದ ವ್ಯಕ್ತಿಯು ಯಾವುದೇ ತಪ್ಪು ದಾರಿಯಲ್ಲಿ ಹೋಗುವುದಿಲ್ಲ. ಸದ್ಯಕ್ಕೀಗ ಧ್ರುವ ಸರ್ಜಾ ಮಗನಿಗೆ ಇಂಥದ್ದೊಂದು ಯೋಗವಿದೆ. ಈ ಮಗು ಮುಂದೊಂದು ದಿನ ಸ್ಟಾರ್ ನಟನಾಗಿ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಅಂತ ದೊಡ್ಡವರು ಹೇಳ್ತಿದ್ದಾರೆ. 

  • ಗಣೇಶ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಇಲಿ ಕಂಡು ಬರೋದು ಶುಭವೋ? ಅಶುಭವೋ?
    on September 19, 2023 at 10:56 am

    ಗಣೇಶ ಚತುರ್ಥಿಯನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಎಂದು ಪರಿಗಣಿಸಲಾಗಿದೆ.  ಈ ಸಮಯದಲ್ಲಿ, ಗಣೇಶನಿಗೆ ತನ್ನ ನೆಚ್ಚಿನ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಗಣೇಶನ ವಾಹನ ಇಲಿ. ಈ ದಿನ ಇಲಿಯನ್ನು ನೋಡೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ನೋಡೋಣ.    ಗಣೇಶ ಚತುರ್ಥಿಯನ್ನು (Ganesha Chaturthi) ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.  ಈ ಹಬ್ಬದ ಸಮಯದಲ್ಲಿ, ಗಣೇಶ ಭಕ್ತರು ತಮ್ಮ ಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ಸ್ಥಾಪಿಸುತ್ತಾರೆ. ಗಣೇಶನನ್ನು ಪೂಜೆ ಮಾಡಿ, ವಿವಿಧ ಭಕ್ಷ್ಯಗಳನ್ನು ಗಣೇಶನಿಗೆ ನೀಡುತ್ತಾರೆ.  ಗಣೇಶನ ನೆಚ್ಚಿನ ತಿಂಡಿಗಳಲ್ಲಿ ಮೋದಕ ಮತ್ತು ಹೂವುಗಳಲ್ಲಿ ಕೆಂಪು ಹೂವುಗಳು ಅವನಿಗೆ ಹೆಚ್ಚು ಇಷ್ಟವಾಗುತ್ತವೆ. ಗಣೇಶನ ನೆಚ್ಚಿನ ಪ್ರಾಣಿ ಇಲಿ, ಅದು ಅವನ ವಾಹನ ಕೂಡ. ನೀವು ಗಣೇಶನನನ್ನು ಎಷ್ಟು ದಿನ ಮನೆಯಲ್ಲಿ ಕೂರಿಸುತ್ತೀರಿ, ಅಷ್ಟು ದಿನದಲ್ಲಿ ಒಂದು ದಿನವಾದರೂ ಮನೆಯಲ್ಲಿ ಇಲಿ ಕಂಡು ಬಂದರೆ ಅದು ಶುಭ ಶಕುನವಾಗಿದೆ.    ಗಣೇಶ ಇಲಿಗಳ ಮೇಲೆ (Ganesha vehicle): ಸವಾರಿ ಮಾಡುತ್ತಾನೆ ಮತ್ತು ಇಲಿಗಳು ಸಾಮಾನ್ಯವಾಗಿ ಮನೆಗಳಲ್ಲಿ ಕಂಡುಬರುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಮನೆಯಲ್ಲಿ ಇಲಿಗಳು ಕಾಣಿಸಬೇಕೆಂದು ಯಾರೂ ಬಯಸದಿದ್ದರೂ, ಗಣೇಶ ಹಬ್ಬದ ಸಮಯದಲ್ಲಿ ಇಲಿ ಮನೆಯಲ್ಲಿ ಕಂಡುಬಂದರೆ ಏನು ಮಾಡಬೇಕು? ಈ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ.  ಆದ್ದರಿಂದ ಗಣೇಶ ಹಬ್ಬದ ಸಮಯದಲ್ಲಿ ನೀವು ಮನೆಯಲ್ಲಿ ಇಲಿಯನ್ನು ನೋಡಿದರೆ, ಅದರಿಂದ ಏನಾಗುತ್ತೆ ಅನ್ನೋದನ್ನು ತಿಳಿಯೋಣ.  ಗಣೇಶ ಚತುರ್ಥಿಯಂದು ಇಲಿಯನ್ನು ನೋಡುವುದರ ಅರ್ಥವೇನು?: ಗಣೇಶ ಚತುರ್ಥಿಯ ದಿನದಂದು, ಮನೆಯಲ್ಲಿ ಇಲಿಯನ್ನು ನೋಡಿದರೆ, ಅದನ್ನು ಕೊಲ್ಲುವ ಬದಲು, ಅದನ್ನು ಮನೆಯಿಂದ ಓಡಿಸಲು ನೀವು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಸ್ತವವಾಗಿ, ಗಣೇಶನನ್ನು ಬುದ್ಧಿವಂತಿಕೆಯ ದೇವರು ಎಂದು ಪರಿಗಣಿಸಲಾಗುತ್ತದೆ, ಆದರೆ ಮನೆಯಲ್ಲಿ ಇಲಿ ಇರುವುದು ಕುಟುಂಬ ಸದಸ್ಯರ ಬುದ್ಧಿವಂತಿಕೆ ಭ್ರಷ್ಟವಾಗಿದೆ ಎಂದು ಸೂಚಿಸುತ್ತದೆ. ವಾಸ್ತವವಾಗಿ, ಇಲಿಯನ್ನು ನಕಾರಾತ್ಮಕತೆಯ (negative sign) ಸಂಕೇತವೆಂದು ಪರಿಗಣಿಸಲಾಗಿದೆ. ಗಣೇಶ ಚತುರ್ಥಿಯ ದಿನದಂದು ಇಲಿ ಕಂಡುಬಂದರೆ, ಅದು ಅಶುಭ. ಗಣೇಶ ಚತುರ್ಥಿಯ ದಿನದಂದು ಇಲಿ ಮನೆಯಿಂದ ಹೊರಗೆ ಹೋಗುವುದನ್ನು ನೀವು ನೋಡಿದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇಲಿ ಸಹ ಮನೆಯ ಎಲ್ಲಾ ಬಡತನವನ್ನು ತನ್ನೊಂದಿಗೆ ತೆಗೆದುಕೊಂಡು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.     ನೀವು ಬೆಳಿಗ್ಗೆ ಇಲಿಯನ್ನು ನೋಡಿದಾಗ ಏನಾಗುತ್ತದೆ?: ನೀವು ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಇಲಿಯನ್ನು ನೋಡಿದರೆ, ಅದು ನಿಮ್ಮ ಕೆಲವು ಪ್ರಮುಖ ಕೆಲಸಗಳು ಆ ದಿನ ಹದಗೆಡಲಿವೆ ಎಂಬುದರ ಸಂಕೇತವಾಗಿದೆ. ಆ ದಿನ ನೀವು ಅತ್ಯಂತ ಮೂರ್ಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಇದು ನಿಮಗೆ ಸಂಕೇತಿಸುತ್ತದೆ, ಅದು ನಿಮಗೆ ಹಾನಿ ಮಾಡುತ್ತದೆ. ಬಿಳಿ ಇಲಿ ಕಾಣಿಸಿಕೊಂಡಾಗ ಏನಾಗುತ್ತದೆ? : ನೀವು ಬಿಳಿ ಇಲಿಯನ್ನು ನೋಡಿದರೆ, ಅದು ಮಂಗಳಕರವಾಗಿದೆ. ಬಿಳಿ ಇಲಿಯನ್ನು ಧನಾತ್ಮಕವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನೆಯಲ್ಲಿನ ತೊಂದರೆಯನ್ನು ತೆಗೆದುಹಾಕುತ್ತದೆ. ಇದು ಮಾತ್ರವಲ್ಲ, ನೀವು ಬಿಳಿ ಇಲಿಯನ್ನು ನೋಡಿದಾಗ ಹಣದ ಕೊರತೆಯೂ ಹೋಗುತ್ತದೆ.  ಸತ್ತ ಇಲಿಯನ್ನು ನೋಡಿದಾಗ ಏನಾಗುತ್ತದೆ?: ನೀವು ಬೆಳಿಗ್ಗೆ ಮನೆಯಲ್ಲಿ ಸತ್ತ ಇಲಿಯನ್ನು ಕಂಡುಕೊಂಡರೆ, ಅದು ಅಶುಭವೂ ಹೌದು. ಇಲಿ ಗಣೇಶನ ಸವಾರಿಯಾಗಿದೆ. ಮನೆಯಲ್ಲಿ ಇಲಿ ಸತ್ತಿರುವುದು ಕಂಡುಬಂದರೆ, ಅದು ಗಣಪತಿ ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂಬುದರ ಸಂಕೇತವಾಗಿದೆ. ಹೀಗಿದ್ದಲ್ಲಿ, ಗಣಪತಿಯನ್ನು ಮೆಚ್ಚಿಸಲು ನೀವು ಜ್ಯೋತಿಷ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.  ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದರೆ ಮತ್ತು ಆ ಸಮಯದಲ್ಲಿ ಸತ್ತ ಇಲಿ ಕಂಡುಬಂದರೆ, ನೀವು ಗಣೇಶನ 11 ಉಪವಾಸಗಳನ್ನು ಆಚರಿಸಬೇಕು.   ಇಲಿ ಪಾದದ ಮೇಲೆ ಹತ್ತಿದಾಗ ಏನಾಗುತ್ತದೆ?: ಇಲಿ ನಿಮ್ಮ ಕಾಲುಗಳ ಮೇಲೆ ಏರಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಅವನು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಲಾಗುತ್ತದೆ. ಇಲಿ ಪಾದದ ಮೇಲೆ ಹತ್ತಿ ಕಚ್ಚಿದರೆ, ಅದು ಅಶುಭ ಸಂಕೇತವಾಗಿದೆ ಏಕೆಂದರೆ ಅದು ಅಜ್ಞಾನವನ್ನು ಹುಟ್ಟುಹಾಕುತ್ತದೆ ಮತ್ತು ಅವನಿಗೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಗಣೇಶನನ್ನು ಪೂಜಿಸಬೇಕು.   

  • ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ
    on September 19, 2023 at 10:49 am

    ಬೆಂಗಳೂರು (ಸೆ.19): ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರು  ರಾಜ್ಯದ ರಾಜಧಾನಿ ಬೆಂಗಳೂರಿನ ಸುತ್ತಲಿನ ಪ್ರದೇಶ ಹಾಗೂ ಹೊರವಲಯದಲ್ಲಿ ಬರೋಬ್ಬರಿ 75 ಸಾವಿರ ಎಕರೆಯಷ್ಟು ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂಬ ದೂರು ಬಂದಿದ್ದು, ಕೂಡಲೇ ತನಿಖೆಯನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತ ಭೂಮಿಯ ಬೆಲೆ ಬಹಳಷ್ಟು ಏರಿಕೆಯಾಗಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ. ನಗರದ ಸುತ್ತಮುತ್ತ 100 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ರೆಸಾರ್ಟ್ ಮತ್ತು ಅತಿಥಿ ತಂಗುದಾಣಗಳು ಸಹ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ, ದೂರುಗಳು ದಾಖಲಾಗಿರುತ್ತವೆ. ಅಂದರೆ, ಬೆಂಗಳೂರು ನಗರದ ಸುತ್ತಮುತ್ತ ಸುಮಾರು 75,000 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಲಾಗಿದೆ.  ಕರ್ನಾಟಕ ಜನತೆಗೆ ಮತ್ತೊಂದು ದರ ಏರಿಕೆ ಶಾಕ್‌: ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ಹೆಚ್ಚಳ! ತಂಗುದಾಣ ನಿರ್ಮಿಸಲು ಸರ್ಕಾರಿ ಭೂಮಿ ಒತ್ತುವರಿ:  ಇದರೊಂದಿಗೆ 5ರಿಂದ 6 ಸಾವಿರ ಎಕರೆ ಭೂಮಿಯಲ್ಲಿ ಕಾನೂನುಬಾಹಿರವಾಗಿ ತಂಗುದಾಣಗಳನ್ನು ನಿರ್ಮಿಸಲು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಾಗಿದೆ.. ಇನ್ನು ಅಂಕಿಅಂಶಗಳ ಸಮೇತವಾಗಿ ಒತ್ತುವರಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿ ಹಾಗೂ ಸರ್ಕಾರದ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಮಾಜಿ ವಿಧಾನ ಪರಿಷತ್‌ ಸದಸ್ಯ ರಮೇಶ್ ಬಾಬು ದೂರು ಮನವಿ ಮಾಡಿದ್ದಾರೆ. ಈ ಕುರಿತಂತೆ ಅಗತ್ಯ ಕ್ರಮವಹಿಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ.    

  • ವೀಣೆಯಲ್ಲಿ ಮೂಡಿದ ಬಂದ ಶಕೀರಾ ಹಾಡು ವಾಕ ವಾಕ ವೋ ವೋ : ವೀಡಿಯೋ ವೈರಲ್
    on September 19, 2023 at 10:46 am

    ಪಾಪ್‌ ಸಿಂಗರ್‌ ಹಾಗೂ ಡಾನ್ಸರ್ ಶಕೀರಾ ಯಾರಿಗೆ ತಾನೇ ಗೊತ್ತಿಲ್ಲ, ಆಕೆಯ ಒಂದೊಂದು ಹಾಡುಗಳು ಅದ್ಭುತ ಅದರಲ್ಲೂ ಆಕೆ ಹಾಡಿದ 2010ರಲ್ಲಿ ಬಿಡುಗಡೆಯಾದ ವಾಕಾ ವಾಕಾ ದಿಸ್ ಇಸ್  ಟೈಮ್ ಫರ್‌ ಸೌತ್‌ ಆಫ್ರಿಕಾ ಹಾಡು ಕೇಳದವರಿಲ್ಲ,  ಹಾಡು ಕೇಳುತ್ತಿದ್ದಂತೆ ಎಲ್ಲರನ್ನು ಈ ಹಾಡನ್ನು ಮತ್ತೆ ಗುನುಗುವುದಲ್ಲದೇ ಕೈ ಕಾಲು ಕುಣಿಸಲು ಶುರು ಮಾಡುತ್ತಾರೆ. ಇಂತಹ ಹಾಡೊಂದು ವೀಣೆಯಲ್ಲಿ ಕೇಳಿಸಿದರೆ ಹೇಗಿರುತ್ತದೆ. ಎಲ್ಲಿಯ ವೀಣೆ ಎಲ್ಲಿಯ ವೆಸ್ಟರ್ನ್‌ ಪಾಪ್‌ ಗಾಯನ ಎಲ್ಲಿಗೆಯಲ್ಲಿಯ ಸಂಬಂಧ ಎಂದು ಅಚ್ಚರಿ ಪಡಬೇಡಿ. ಏಕೆಂದರೆ ಇಲ್ಲೊಬ್ಬರು ವೀಣಾಕಾರರು ಇದನ್ನು ಸಾಧ್ಯವಾಗಿಸಿದ್ದು, ವೀಣೆಯಲ್ಲಿ ಮೂಡಿ ಬಂದ ಶಕೀರಾ ವಾಕಾ ಹಾಡು ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ.  ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸೇರುವ ಸಂಗೀತ ಉಪಕರಣ ವೀಣೆಗೂ ಪಾಶ್ಚಾತ್ಯದ ಈ  ಫೇಮಸ್ ಹಾಡಿಗೂ ಯಾವುದೇ ಸಂಬಂಧವಿಲ್ಲ, ಆದರೂ ಈ ವೀಣೆಯಲ್ಲೂ ಈ ರೀತಿ ಪಾಶ್ಚಾತ್ಯ ಸಂಗೀತಾದ ಹಾಡನ್ನು ಇಷ್ಟೊಂದು ಸೊಗಸಾಗಿ ನುಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಗಾಯಕ. ವೀಣಾವಾದಕ ಮಹೇಶ್ ಪ್ರಸಾದ್ ಎಂಬುವವರ ಇನ್ಸ್ಟಾಗ್ರಾಮ್‌ನಿಂದ (Instagram) ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಈ ಪ್ರಯೋಗ ಸಂಗೀತಾ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು.  ವಾಕಾ ವಾಕಾ ವೋ ವೋ ಶಕೀರಾಗೆ ಸಂಕಷ್ಟ: 8 ವರ್ಷ ಜೈಲು ಶಿಕ್ಷೆ ಭೀತಿ ತುಂಬಾ ಸೊಗಸಾಗಿ ವೀಣೆಯಲ್ಲಿ ಶಕೀರಾ ಅವರ ವಾಕ ವಾಕ ವೋ ವೋ ಹಾಡು ಮೂಡಿ ಬಂದಿದ್ದು, ವೀಣಾ ವಾದಕನ ಮೋಡಿಗೆ ನೋಡುಗರು ಮರುಳಾಗಿದ್ದಂತು ನಿಜ 2010ರ ಫುಟ್‌ಬಾಲ್ ವರ್ಲ್ಡ್‌ ಕಪ್ ಗೀತೆ ಇದಾಗಿದ್ದು, ವೀಣೆಯಲ್ಲಿ ಹೇಗೆ ಬಂದಿದೆ ನೋಡಿ ಎಂದು ಬರೆದು ಮಹೇಶ್ ಪ್ರಸಾದ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಣೆಯಲ್ಲಿ ಮೂಡಿ ಬಂದ ಶಕೀರಾ (Shakira) ಹಾಡು ಕೇಳಿದವರೆಲ್ಲಾ ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಶಾಸ್ತ್ರೀಯ ವಾಕ ವಾಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಇಡೀ ಸಂಗೀತಾ ಇಂಡಸ್ಟ್ರಿಗೆ ಹೊಸ ಸಾಧ್ಯತೆಯ ಬಗ್ಗೆ ಯೋಚಿಸುವಂತೆ ಮಾಡಿದ್ದೀರಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಭಾರತದ ಕ್ಲಾಸಿಕಲ್ ಸಂಗೀತಾ ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.   ಫೇಸ್‌ಬುಕ್‌ನಲ್ಲಿ ಈ ವೀಡಿಯೋವನ್ನು ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ನಮ್ಮ ಸಂಗೀತಾ ಉಪಕರಣಗಳು ತುಂಬಾ ವೈವಿಧ್ಯತೆಯನ್ನು ಹೊಂದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಾಕಾ ವಾಕಾ ವೋ ವೋ ಶಕೀರಾಗೆ ಸಂಕಷ್ಟ: 8 ವರ್ಷ ಜೈಲು ಶಿಕ್ಷೆ ಭೀತಿ ಬರೀ ಇದೊಂದೆ ಅಲ್ಲ, ಇವರ ಸಾಮಾಜಿಕ ಜಾಲತಾಣದಲ್ಲಿ ಹಲವು ಸುಪ್ರಸಿದ್ಧ ಹಾಡುಗಳನ್ನು ಅವರು ವೀಣೆಯಲ್ಲಿ ನುಡಿಸಿದ್ದು ಕೇಳಲು ಬಹಳ ಮಧುರವಾಗಿದೆ.  ಇದರ ಜೊತೆಗೆ ಅವರು ಈ ಹಿಂದೆ ಶಕೀರಾ ಹಾಡಿದ ಮತ್ತೊಂದು ಫೇಮಸ್ ಹಾಡು ಬೇಬಿ ಕಾಮ್‌ಡೌನ್ ಬೇಬಿ ಕಾಮ್‌ಡೌನ್ ಹಾಡನ್ನು ಕೂಡ ನುಡಿಸಿದ್ದು, ಅದು ಕೂಡ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಅನೇಕರು ವೀಣೆಯಲಲ್ಲಿ ಮೂಡಿ ಬಂದ ಆ ಹಾಡಿಗೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ರಿಲೀಸ್ ಆದ ಜವಾನ್ ಚಿತ್ರದ ಹಾಡು ಕೂಡ ವೀಣೆಯಲ್ಲಿ ಮೂಡಿ ಬಂದಿದೆ. ನೀವು ಕೂಡ ವೀಣೆಯಲ್ಲಿ ಮೂಡಿ ಬಂದ ಈ ಹಾಡನ್ನು ಕೇಳೀ ನೋಡಿ…          View this post on Instagram                       A post shared by Mahesh Prasad Veena (@maheshprasadl)  

  • ಭ್ರಷ್ಟ ಎಂದು ಪ್ರಶ್ನೆ ಮಾಡಿದ ಪತ್ರಕರ್ತೆಗೆ ಉಗುಳಿದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಚಾಲಕ: ನೆಟ್ಟಿಗರ ಕಿಡಿ
    on September 19, 2023 at 10:42 am

    ಲಂಡನ್‌ (ಸೆಪ್ಟೆಂಬರ್ 19, 2023): ಇಂಗ್ಲೆಂಡ್‌ ರಾಜಧಾನಿ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಾಹನದ ಮುಂಭಾಗದ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ 73 ವರ್ಷದ ರಾಜಕಾರಣಿಯ ವಾಹನವನ್ನು ಮಹಿಳೆಯೊಬ್ಬರು ಸಮೀಪಿಸುತ್ತಿರುವುದನ್ನು ಸಹ ಈ ವಿಡಿಯೋ ತೋರಿಸುತ್ತದೆ. ನವಾಜ್‌ ಷರೀಫ್‌ ಕಾರಿನ ಬಳಿ ಹೋದ ಮಹಿಳೆ ಪಾಕ್‌ ಮಾಜಿ ಪ್ರಧಾನಿಯನ್ನು ಭ್ರಷ್ಟರೇ ಎಂದು ಪ್ರಶ್ನಿಸಿದ್ದಾರೆ. “ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ರಾಜಕಾರಣಿ ಎಂದು ನಾನು ಕೇಳಿದ್ದೇನೆ,” ಎಂದೂ ಡ್ರೈವರ್ ಕಾರಿನ ಕಿಟಕಿಯನ್ನು ತೆರೆದಾಗ ಆಕೆ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ನವಾಜ್‌ ಷರೀಫ್‌ ಚಾಲಕ ಆಕೆಯ ಮುಖದ ಮೇಲೆ ಉಗುಳಿ, ಕಾರಿನ ಕಿಟಕಿ ಹಾಕಿಕೊಂಡು ಕಾರನ್ನು ಮುಂದೆ ಓಡಿಸಿದ್ದಾರೆ. ಇದನ್ನು ಓದಿ: 41 ಕೋಟಿ ಉಳಿತಾಯ ಮಾಡಿ 35 ವರ್ಷಕ್ಕೇ ನಿವೃತ್ತಿಯಾಗ್ತೀನಿ ಎಂದಿದ್ದ ಗೂಗಲ್‌ ಟೆಕ್ಕಿಗೆ ದೊಡ್ಡ ಶಾಕ್! ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿಯ ಸದಸ್ಯೆ ಡಾ.ಫಾತಿಮಾ ಕೆ, ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿರುವ ಮಹಿಳೆ ಪತ್ರಕರ್ತೆ ಎಂದು ಅವರು ಉಲ್ಲೇಖಿಸಿದ್ದಾರೆ. ”ಪ್ರಶ್ನೆ ಕೇಳಿದ ಪತ್ರಕರ್ತನ ಮುಖದ ಮೇಲೆ ನವಾಜ್ ಷರೀಫ್ ಚಾಲಕ ಉಗುಳಿದ್ದಾನೆ! ಉದಾರವಾದಿಗಳು, ಬುದ್ಧಿಜೀವಿಗಳು ಅಥವಾ ಸ್ತ್ರೀವಾದಿಗಳು ಯಾರೂ ಇದರ ವಿರುದ್ಧ ಮಾತನಾಡುವುದಿಲ್ಲ. Sick of this selective morality!! ಅಸಹ್ಯಕರ ಎಂದು ಹೇಳಿದ್ದಾರೆ. Nawaz Sharif’s driver spits on the face of a journalist who asked a question! None of the liberals, intellectuals or feminists will speak against it. Sick of this selective morality!! Disgusting 🤢 pic.twitter.com/fsKdgVu5vm — Dr Fatima K – PTI (@p4pakipower1) September 16, 2023 ಇಂಟರ್‌ನೆಟ್ ಬಳಕೆದಾರರೂ ಈ ವಿಡಿಯೋದಿಂದ ಆಕ್ರೋಶಗೊಂಡಿದ್ದು, ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ”ಅವನು ಕೇವಲ ಭ್ರಷ್ಟನಲ್ಲ, ದೆವ್ವ ಕೂಡ ಎಂದು ಸಾಬೀತುಪಡಿಸುತ್ತಾನೆ’’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ”ನೀವು ಪಾಕಿಸ್ತಾನದ ಭ್ರಷ್ಟ ರಾಜಕಾರಣಿ ಎಂದು ನಾನು ಕೇಳಿದ್ದೇನೆ ಎಂದು ಮಹಿಳಾ ಪತ್ರಕರ್ತೆ ಕೇಳಿದರು. ನವಾಜ್ ಷರೀಫ್ ತನ್ನ ಸಿಬ್ಬಂದಿಯನ್ನು ತೋರಿಸಿದನು ಮತ್ತು ಅವನು ಮಹಿಳೆಯ ಮುಖದ ಮೇಲೆ ಉಗುಳಿದನು. ಮತ್ತು ಅಂತಹ ಘೇಂಡಾಮೃಗವನ್ನು ಪಾಕಿಸ್ತಾನಿಗಳ ಮೇಲೆ ಹೇರಲಾಗುತ್ತಿದೆ,’’ ಎಂದು ಇನ್ನೊಬ್ಬರು ಬರೆದಿದ್ದಾರೆ.  ಇದನ್ನೂ ಓದಿ: ಮೆಕ್ಸಿಕೋದಲ್ಲಿ ಪತ್ತೆಯಾದ ಏಲಿಯೆನ್ಸ್‌ ಅವಶೇಷದ ನಿಜರೂಪ ಬಹಿರಂಗಪಡಿಸಿದ ಎಲಾನ್ ಮಸ್ಕ್‌! ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿಯಾಗಿರುವ ನವಾಜ್‌ ಷರೀಫ್ ವೈದ್ಯಕೀಯ ಚಿಕಿತ್ಸೆಗಾಗಿ 4 ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ ನವೆಂಬರ್ 2019 ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರ ಮುನ್ನಡೆಸಲು ಅವರು ಅಕ್ಟೋಬರ್ 21 ರಂದು ಲಂಡನ್‌ನಿಂದ ದೇಶಕ್ಕೆ ಹಿಂತಿರುಗಲು ನಿರ್ಧರಿಸಿದ್ದಾರೆ. ಇನ್ನು, UK ಯಲ್ಲಿ ಅವರ ನಾಲ್ಕು ವರ್ಷಗಳ ಸ್ವಯಂ-ಹೇರಿದ ದೇಶಭ್ರಷ್ಟತೆಯನ್ನು ಕೊನೆಗೊಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್‌ ಪಾವತಿ ಮಾಡಲ್ಲ ಅಂತ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ನಿವಾಸಿಗಳು: ಸರ್ಕಾರದ ವಿರುದ್ಧ ತೀವ್ರ ಆಕ್ರೋಶ “ನವಾಜ್ ಷರೀಫ್ ಅಕ್ಟೋಬರ್ 21 ರಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ” ಎಂದು ಅವರ ಕಿರಿಯ ಸಹೋದರ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಜಗತ್ತಿನ ನಂ. 1 ಶ್ರೀಮಂತ ರಾಜ ಇವ್ರೇ: ಈ ಅರಸನ ಸಂಪತ್ತಿನ ಎದುರು ಅಂಬಾನಿ, ಅದಾನಿ, ಎಲಾನ್‌ ಮಸ್ಕ್‌ ಲೆಕ್ಕಕ್ಕೇ ಇಲ್ಲ!

  • ಬಾಲಿವುಡ್​ ಬ್ಯೂಟಿ ಶ್ರುತಿ ಹಾಸನ್​ ಹಿಂಬಾಲಿಸಿದ ನಿಗೂಢ ವ್ಯಕ್ತಿ! ಬೆಚ್ಚಿಬಿದ್ದ ನಟಿ
    on September 19, 2023 at 10:42 am

     ಇತ್ತೀಚೆಗಷ್ಟೇ ‘ವಾಲ್ಟೇರ್ ವೀರ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ದಕ್ಷಿಣ ಮತ್ತು ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟಿ ಶ್ರುತಿ ಹಾಸನ್ ಅವರು ಬೆಚ್ಚಿಬಿದ್ದಿರೋ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ  ನಟಿ  ಬಹಳ ಭಯಭೀತರಾಗಿದ್ದನ್ನು ನೋಡಬಹುದು.  ವಾಸ್ತವವಾಗಿ, ಕಪ್ಪು ಕನ್ನಡಕವನ್ನು ಧರಿಸಿರುವ ಅಪರಿಚಿತ ವ್ಯಕ್ತಿ ನಿರಂತರವಾಗಿ ನಟಿಯನ್ನು ಬೆನ್ನಟ್ಟುತ್ತಿರುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ನಟಿ ಎಲ್ಲಿಗೆ ಹೋದರೂ ಆ ವ್ಯಕ್ತಿ ಶ್ರುತಿ ಅವರನ್ನು ಹಿಂಬಾಲಿಸುವುದುನ್ನು ನೋಡಬಹುದು.  ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದವರೆಗೆ ವ್ಯಕ್ತಿ ನಟಿಯನ್ನು ಹಿಂಬಾಲಿಸಿದಾಗ ನಟಿ ಅಕ್ಷರಶಃ ಬೆವೆತು ಹೋಗಿದ್ದಾರೆ.   ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಜನರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.  ಆ ಅಪರಿಚಿತ ವ್ಯಕ್ತಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಸೆಲೆಬ್ರಿಟಿಗಳಿಗೆ ಇದೆಲ್ಲಾ  ಮೂಮೂಲು ಎಂದಿದ್ದಾರೆ ಹಲವರು. ಆತನಿಗೂ ನಟಿಯರನ್ನು ನೋಡಿ ಖುಷಿಯಾಗಿದೆ. ನಟಿ ಶ್ರುತಿಯ ವಿಡಿಯೋವನ್ನು ಪಾಪರಾಜಿಗಳು ಮಾಡುತ್ತಿರುವುದನ್ನು ಗಮನಿಸಿರುವ ಆತ, ಶ್ರುತಿಯ ಜೊತೆ ನನ್ನನ್ನೂ ವಿಡಿಯೋ ಬಂದು ಫೇಮಸ್​ ಆಗಲಿ ಎಂದು ಅಂದುಕೊಂಡಿರುವಂತಿದೆ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, ಆ ವ್ಯಕ್ತಿ ಖಂಡಿತವಾಗಿ ತನ್ನ ಸಾಮಾಜಿಕ ಜಾಲತಾಣದಲ್ಲಿ ನಟಿಯೊಂದಿಗೆ ಕಳೆದ ಅದ್ಭುತ ಕ್ಷಣಗಳು ಎಂದು ಕ್ಯಾಪ್ಷನ್​ ಕೊಟ್ಟು ವಿಡಿಯೋ ಶೇರ್​ ಮಾಡಿಕೊಂಡಿರುತ್ತಾನೆ ಎಂದಿದ್ದಾರೆ.  ಬಾಯ್‌ ಫ್ರೆಂಡ್‌ ಹೂಸು ನಂಗಿಷ್ಟ ಅಂದ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌! ಆದರೆ ಕೆಲವರು ಭದ್ರತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಟಿಯ ಭದ್ರತಾ ಕಮಾಂಡರ್‌ಗಳು ಅವರ  ಜೊತೆ ಇದ್ದರೂ,  ಅಂತಹ ಅಪರಿಚಿತ ವ್ಯಕ್ತಿಗಳು ಬೆನ್ನಟ್ಟುವುದು ಸುರಕ್ಷತೆಯನ್ನು ಪ್ರಶ್ನಿಸುತ್ತದೆ. ಇದರಿಂದ ಯಾರಾದರೂ ಸಹಜವಾಗಿ ಹೆದರಿಯೇ ಹೆದರುತ್ತಾರೆ, ಸೆಲೆಬ್ರಿಟಿಗಳಿಗೆ ರಕ್ಷಣೆ ಅಗತ್ಯ ಎಂದಿದ್ದಾರೆ.  ಸತತವಾಗಿ ಹಿಂಬಾಲಿಸಿದ್ದರಿಂದ ಶ್ರುತಿ ತೀವ್ರ ನೊಂದುಕೊಂಡಾಗ, ‘ಯಾಕೆ ಹಿಂದೆ ಬರುತ್ತಿದ್ದಾನೆ, ಯಾರೀತ’ ಎಂದು ಕೋಪದಿಂದ ಹೇಳುತ್ತಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ಸ್ವಲ್ಪ ನೊಂದುಕೊಂಡ ಶ್ರುತಿ, ಅಪರಿಚಿತ ವ್ಯಕ್ತಿಗೆ ‘ನೀನು ಯಾರೆಂದು ನನಗೆ ಗೊತ್ತಿಲ್ಲ, ನನ್ನನ್ನು ಯಾಕೆ ಹಿಂಬಾಲಿಸುತ್ತಿದ್ದೀಯಾ?’ ಎಂದು ಹೇಳಿದ್ದು, ಬಳಿಕ ನಟಿ ಕಾರು ಹತ್ತಿ ಹೊರಟು ಹೋಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಆ ವ್ಯಕ್ತಿ ಮಾತ್ರ ಯಾವುದರ ಪರಿವೇ ಇಲ್ಲದೇ ನಿರ್ದಾಕ್ಷಿಣ್ಯವಾಗಿ ನಟಿಯ ಹಿಂದು ಬಹಳ ದೂರದವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಟಿ ಹತ್ತಿರ ಬಂದಾಗಲೂ ಆತ ಸೆಲ್ಫಿ ಕೇಳಲಿಲ್ಲ. ಆದರೆ ಹಿಂಬಾಲಿಸಿಕೊಂಡು ಬಂದಿರುವುದು ನಟಿಗೆ ಗಾಬರಿ ತರಿಸಿದೆ. ಇನ್ನು ಶ್ರುತಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ,  ಶ್ರುತಿ ಹಾಸನ್ ‘ವಾಲ್ಟೇರ್ ವೆರಯ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಶೀಘ್ರದಲ್ಲೇ ಪ್ರಶಾಂತ್ ನೀಲ್ ನಿರ್ದೇಶನದ ‘ಬಾಹುಬಲಿ’ ಅಭಿನಯದ ಪ್ರಭಾಸ್ ಅವರೊಂದಿಗೆ ಬಹುನಿರೀಕ್ಷಿತ ಚಿತ್ರ ‘ಸಾಲರ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಕೈಯಲ್ಲಿ  ಇನ್ನೂ ಅನೇಕ ಯೋಜನೆಗಳು ಇವೆ.  ಇದಲ್ಲದೆ, ಶ್ರುತಿ ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇದಲ್ಲದೆ, ನಟಿ ತನ್ನ ಗೆಳೆಯ ಶಂತನು ಬಗ್ಗೆಯೂ ಸಾಕಷ್ಟು ಸುದ್ದಿಗಳನ್ನು ಮಾಡುತ್ತಿದ್ದಾರೆ.   ಬ್ಲ್ಯಾಕ್‌ ಡ್ರೆಸ್‌ನಲ್ಲಿ ಸಲಾರ್‌ ಬ್ಯೂಟಿ ಶ್ರುತಿ ಹಾಸನ್: ‘ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ’ ಎಂದ ಫ್ಯಾನ್ಸ್‌         View this post on Instagram                       A post shared by Viral Bhayani (@viralbhayani)

  • ಸುಖ ಸಂಸಾರಕ್ಕೆ ಫೆಂಗ್ ಶೂಯಿ ಸೂತ್ರಗಳು..!
    on September 19, 2023 at 10:32 am

    ವ್ಯಕ್ತಿಯ ವೈವಾಹಿಕ ಜೀವನದಲ್ಲಿ ಏರಿಳಿತಗಳಿವೆ ಮತ್ತು ಇದು ಸಾಮಾನ್ಯ ಸಂಗತಿಯಾಗಿದೆ. ಆದರೆ ಕೆಲವೊಮ್ಮೆ ವಿಷಯಗಳು ಮಿತಿಯನ್ನು ಮೀರಿ ಹೋಗುತ್ತವೆ ಮತ್ತು ನಂತರ ಪತಿ-ಪತ್ನಿಯರ ನಡುವಿನ ಸಂಬಂಧವು ಮಾನಸಿಕ ಒತ್ತಡ ಮತ್ತು ಜಗಳಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಹಲವು ಬಾರಿ ವಿಚ್ಛೇದನಕ್ಕೆ ಕಾರಣವಾಗುತ್ತದೆ.  ಫೆಂಗ್ ಶೂಯಿ ಪ್ರಕಾರ, ಮನೆಯ ಕೋಣೆಗಳಲ್ಲಿ ಗುಲಾಬಿ ಅಥವಾ ಕೆಂಪು ಬಣ್ಣವನ್ನು ಹೆಚ್ಚು ಬಳಸಿ. ಇದನ್ನು ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ .ಕೋಣೆಯಲ್ಲಿ ಕೆಂಪು ಬಣ್ಣವನ್ನು ಅತಿಯಾಗಿ ಬಳಸಬಾರದು. ಏಕೆಂದರೆ ಇದು ವ್ಯಕ್ತಿಯಲ್ಲಿ ಕೋಪವನ್ನು ಹೆಚ್ಚಿಸುತ್ತದೆ.  ಇದಲ್ಲದೆ, ಮಲಗುವ ಕೋಣೆಯನ್ನು ಯಾವಾಗಲೂ ಸ್ವಚ್ಛವಾಗಿಡಿ ಮತ್ತು ಬಟ್ಟೆ ಮತ್ತು ಮಕ್ಕಳ ಆಟಿಕೆಗಳನ್ನು ಬಿಡಬೇಡಿ. ಇದು ಮನೆಯ ಮಲಗುವ ಕೋಣೆಯ ಶಕ್ತಿಯನ್ನು ಧನಾತ್ಮಕವಾಗಿರಿಸುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.   ಸಕಾರಾತ್ಮಕತೆಗಾಗಿ ನೀವು ಮಲಗುವ ಕೋಣೆಯಲ್ಲಿ ತಾಜಾ ಹೂವುಗಳನ್ನು ಅಥವಾ  ಒಳಾಂಗಣ ಸಸ್ಯಗಳನ್ನು ಇರಿಸಬಹುದು. ಇದರೊಂದಿಗೆ, ಮನೆಯ ಶಕ್ತಿಯು ಧನಾತ್ಮಕವಾಗಿ ಉಳಿಯುತ್ತದೆ ಮತ್ತು ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಕೊರತೆ ಇರುವುದಿಲ್ಲ.    ಮನೆಯ ಆಗ್ನೇಯ ಮೂಲೆಯು ಪ್ರೀತಿ, ಮದುವೆ ಮತ್ತು ಸಂಬಂಧಗಳನ್ನು ಪ್ರತಿನಿಧಿಸುತ್ತದೆ ಮತ್ತು ಆದ್ದರಿಂದ ಮನೆಯ ಈ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿ. ನೀವು ಈ ಸ್ಥಳವನ್ನು ಮೇಣದಬತ್ತಿಗಳು ಅಥವಾ ಹರಳುಗಳಿಂದ ಅಲಂಕರಿಸಬಹುದು. ಹೀಗೆ ಮಾಡುವುದರಿಂದ ಸಂಬಂಧಗಳು ಸುಧಾರಿಸುತ್ತವೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.  ಇದನ್ನು ನೆನಪಿನಲ್ಲಿಡಿ, ಮಲಗುವ ಕೋಣೆಯಲ್ಲಿ ಯಾವಾಗಲೂ  ಬಾತುಕೋಳಿಗಳು, ಪ್ರೀತಿಯ ಪಕ್ಷಿಗಳು, ದೀಪಗಳು ಮತ್ತು ಕುರ್ಚಿಗಳನ್ನು ಜೋಡಿಯಾಗಿ ಇರಿಸಿ. ಇದು ಪ್ರೀತಿಯ ಜೀವನದಲ್ಲಿ ಸಮತೋಲನವನ್ನು ಕಾಪಾಡುತ್ತದೆ ಮತ್ತು ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ.  ಹಾಸಿಗೆಯ ಮುಂದೆ ಕನ್ನಡಿ ಇಡಬೇಡಿ. ಇದು ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಘರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು  ನಿದ್ರೆಯ ಸಮಸ್ಯೆಗಳನ್ನು ಹೊಂದಬಹುದು.

  • ಅನಂತ್‌ನಾಗ್‌ನಲ್ಲಿ ಲಷ್ಕರ್‌ ಭಯೋತ್ಪಾದಕ ಉಜೈರ್‌ ಖಾನ್‌ನ ಹತ್ಯೆ ಮಾಡಿದ ಭಾರತೀಯ ಸೇನೆ!
    on September 19, 2023 at 10:32 am

    ನವದೆಹಲಿ (ಸೆ.19): ಅನಂತನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಉಜೈರ್‌ ಖಾನ್‌ ಬೀದಿ ಹೆಣವಾಗಿದ್ದಾರೆ. ಉಜೈರ್‌ ಖಾನ್‌ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಂಗಳವಾರ ಹೇಳಿದ್ದಾರೆ. ಕೋಕರ್‌ನಾಗ್‌ನ ಕಾಡುಗಳ ನಡುವಿನಿಂದ ಉಜೈರ್‌ ಖಾನ್‌ ಶವವನ್ನು ಮಂಗಳವಾರ ಹೊರತೆಗೆಯಲಾಗಿದೆ.  ಎಡಿಜಿಪಿ ವಿಜಯ್ ಪ್ರಕಾರ, ಗದುಲ್ ಕೋಕರ್‌ನಾಗ್‌ನಲ್ಲಿ 2-3 ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಉಜೈರ್ ಹೊರತುಪಡಿಸಿ, ಮತ್ತೊಂದು ಮೃತದೇಹ ಕೂಡ ಪತ್ತೆಯಾಗಿದೆ. ಮೂರನೇ ಉಗ್ರನ ಶವ ಪತ್ತೆಯಾಗುವ ಸಾಧ್ಯತೆಯೂ ಇದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳದ ಸಮೀಪಕ್ಕೆ ಹೋಗದಂತೆ ಪೊಲೀಸರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಸೋಮವಾರ ಮುಂಜಾನೆ, ಭದ್ರತಾ ಪಡೆಗಳು ಅರಣ್ಯದಿಂದ ಎರಡು ಶವಗಳನ್ನು ವಶಪಡಿಸಿಕೊಂಡವು. ಅವರಲ್ಲಿ ಒಬ್ಬನನ್ನು ಜವಾನ್ ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನ ಮೊದಲ ದಿನವಾದ ಸೆಪ್ಟೆಂಬರ್ 13 ರಿಂದ ಪ್ರದೀಪ್ ನಾಪತ್ತೆಯಾಗಿದ್ದರು. ಅದೇ ದಿನ, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೌಂಚಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದರು. ಕಳೆದ ಒಂದು ವಾರದಲ್ಲಿ ಕಾಶ್ಮೀರದ ಮೂರು ಸ್ಥಳಗಳಲ್ಲಿ ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ 5 ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಅನಂತ್‌ನಾಗ್‌ನಲ್ಲಿ 1, ಬಾರಾಮುಲ್ಲಾದಲ್ಲಿ 3 ಮತ್ತು ರಾಜೌರಿಯಲ್ಲಿ 2 ಅಂದರೆ ಒಟ್ಟು 6 ಭಯೋತ್ಪಾದಕರು ಹತರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಇದುವರೆಗಿನ ಸುದೀರ್ಘ ಕಾರ್ಯಾಚರಣೆ ಇದಾಗಿದೆ. ಅದೇ ಸಮಯದಲ್ಲಿ, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೂರನೇ ಸುದೀರ್ಘ ಎನ್‌ಕೌಂಟರ್ ಆಗಿದೆ. ಸೆಪ್ಟೆಂಬರ್ 13 ರಂದು ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ 100 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಆದಷ್ಟು ಬೇಗ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲು ಅನಂತನಾಗ್‌ನಲ್ಲಿ ಇನ್ನೂ 10 ಪ್ಯಾರಾ ಕಮಾಂಡೋಗಳು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಎಡಿಜಿಪಿ ವಿಜಯ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಮಂಗಳವಾರ ಗದುಲ್ ಎನ್‌ಕೌಂಟರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೂ ಮುನ್ನ ಕೊನೆಯದಾಗಿ ಕಂದನ ನೋಡಲು ವಿಡಿಯೋ ಕಾಲ್ ಮಾಡಿದ್ದ ಹುತಾತ್ಮ ಹುಮಾಯುನ್! ಸೋಮವಾರ, ಅನಂತನಾಗ್‌ನಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಭಯೋತ್ಪಾದಕರು ಶ್ರೀನಗರದಲ್ಲಿ ಸಿಆರ್‌ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡಿದ್ದರು. ಸಿಆರ್‌ಪಿಎಫ್ ಬುಲೆಟ್ ಪ್ರೂಫ್ ವಾಹನದ ಮೇಲೆ ಪಿಸ್ತೂಲ್ ಹಿಡಿದ ಭಯೋತ್ಪಾದಕ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಶ್ರೀನಗರ ಪೊಲೀಸರು ತಿಳಿಸಿದ್ದಾರೆ. ಆದರೆ, ಶ್ರೀನಗರ ಜಿಲ್ಲೆಯ ಖನ್ಯಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ದಾಳಿಯನ್ನು ವಿಫಲಗೊಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಆರ್‌ಪಿಎಫ್ ವಾಹನದತ್ತ ಗುಂಡು ಹಾರಿಸಿದ ನಂತರ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿದ್ದಾನೆ.   ಬೆಟ್ಟದ ಮೇಲೆ ಹೇಡಿಗಳಂತೆ ಅಡಿಗಿ ಕೂತ ಉಗ್ರರು, ಮತ್ತೊಬ್ಬ ಸೈನಿಕ ಹುತಾತ್ಮ! ಸೋಮವಾರ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಮೂವರು ಶಂಕಿತ ಭಯೋತ್ಪಾದಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ತೌಸಿಫ್-ಉಲ್-ನಬಿ, ಜಹೂರ್-ಉಲ್-ಹಸನ್ ಮತ್ತು ರೆಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೂವರನ್ನೂ ಜೈಲಿಗೆ ಕಳುಹಿಸಲಾಗಿದೆ.

  • ಕಾವೇರಿ ನೀರು ನಿಗಮದ ಅಧಿಕಾರಿಗಳಿಗೆ ಸಚಿವರ ಎದುರೇ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ!
    on September 19, 2023 at 10:21 am

    ಮಂಡ್ಯ (ಸೆ.19): ಮಳೆಯಾಶ್ರಿತ ಪ್ರದೇಶಗಳಲ್ಲಿ ಕೆರೆಕಟ್ಟೆಗಳಿಗೆ ನೀರು ತುಂಬಿಸದಿರೋದಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಮಂಡ್ಯದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಅವಲೋಕನ ಸಂಬಂಧ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರಾವರಿ ನಿಗಮದ ಇಂಜಿನಿಯರ್‌ಗಳಾಗಿ ನೀವೇನು ಕೆಲಸ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ ಶಾಸಕರು, ಬೆಳೆಗೆ ನೀರು ಕೇಳ್ತಿಲ್ಲ, ಕೆರೆ ಕಟ್ಟೆಗಳಿಗೆ ಯಾಕೆ ನೀರು ತುಂಬಿಸಿಲ್ಲ. ಕನ್ನಂಬಾಡಿ ಕಟ್ಟೆ ನೀರು ಎರಡು ತಾಲೂಕಿಗೆ ಮಾತ್ರ  ಸೀಮಿತವಾಗಿದೆಯ? ಮಳವಳ್ಳಿ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರೇ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ತಬ್ಬಿಬ್ಬಾದ ಅಧಿಕಾರಿಗಳು. ಹಿಂದಿನ ಕಾಮಗಾರಿ ನಡೆದಿಲ್ಲ, ಬಿಲ್‌ಪಾಸ್‌ ಮಾಡಬಾರದು: ಶಾಸಕ ನರೇಂದ್ರಸ್ವಾಮಿ ಸೂಚನೆ ಕೆರೆ ಕಟ್ಟೆಗಳಿಗೆ ನೀರು ಬಿಟ್ಟಿದ್ದೇವೆ ಎಂದು ಸಬೂಬು ಹೇಳುತ್ತಿದ್ದಂತೆ ಮತ್ತಷ್ಟು ಕೋಪಗೊಂಡ ಶಾಸಕರು, ಎಷ್ಟು ಕೆರೆಗೆ ನೀರು ತುಂಬಿಸಿದ್ದೀರಿ ಮಾಹಿತಿ ಕೊಡಿ ಎನ್ನುತ್ತಿದ್ದಂತೆ ತಡಬಡಾಯಿಸಿದರು. ಮೊದಲು ನಮ್ಮ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸಿ. ನಾವು ನಿಮ್ ಸಹವಾಸಕ್ಕೇ ಬರೋದಿಲ್ಲ ಎಂದರು. ಬಳಿಕ ಸಚಿವ ಚಲುವರಾಯಸ್ವಾಮಿಗೆ ಮನವಿ ಮಾಡಿದರು.

  • ಪ್ರೀತ್ಸೆ ಅಂತ ಕ್ರಿಶ್ಚಿಯನ್ ಹುಡ್ಗಿ ಹಿಂದೆ ಬಿದ್ದ ಧನಂಜಯ್; ಸಾಥ್‌ ಕೊಟ್ಟ ಶಿವಣ್ಣ!
    on September 19, 2023 at 10:21 am

    ಜೀವನ ಅಂದ್ರೆ ಸಿಹಿ ಕಹಿ ಹುಳಿಯ ಸಮ್ಮಿಲನ. ಈ ಮೂರನ್ನೂ ಸಮನಾಗಿ ಫೀಲ್ ಮಾಡಿದ್ರೆ ಮಾತ್ರ ಆ ಜೀವನಕ್ಕೊಂದು ಅರ್ಥ ಇಲ್ಲದಿದ್ರೆ ಎಲ್ಲವೂ ವ್ಯರ್ಥ. ಇಂತಹ ನೀತಿ ಪಾಠ ಹೇಳ್ತಾ ಬಂದ ಸಿನಿಮಾ ತೋತಾಪುರಿ. ಚಿತ್ರದ 2ನೇ ಭಾಗ ರಿಲೀಸ್‌ಗೆ ಸಜ್ಜಾಗಿದ್ದು ಟ್ರೈಲರ್ ರಿಲೀಸ್ ಮಾಡಲು ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ.  ಗಣೇಶ ಹಬ್ಬದಂದೇ ಏರಿಯಾಗೆ ನುಗ್ಗಿದ ದುನಿಯಾ ವಿಜಿ! ವಿಘ್ನೇಶ್ವರನ ಹಬ್ಬದಂದು ಏನಾಯ್ತು?

  • ಬಿಂದ್ರನ್‌ವಾಲೆಗೆ ಹಣ ನೀಡಿ ಖಲಿಸ್ತಾನ ಹೋರಾಟ ಸೃಷ್ಟಿ, ಕಾಂಗ್ರೆಸ್ ಮುಖವಾಡ ಬಯಲು ಮಾಡಿದ ನಿವೃತ್ತ R&W ಅಧಿಕಾರಿ
    on September 19, 2023 at 10:16 am

    ನವದೆಹಲಿ(ಸೆ.19) ಖಲಿಸ್ತಾನ ಹೋರಾಟ, ಖಲಿಸ್ತಾನ ಪ್ರತಿಭಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ರೈತ ಪ್ರತಿಭಟನೆ ವೇಳೆ ಖಲಿಸ್ತಾನ ಹೋರಾಟ ಭಾರತದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿತ್ತು. ಕೆಂಪು ಕೋಟೆ ಮೇಲೆ ಮುತ್ತಿಗೆ ಹಾಕಿತ್ತು. ಇನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಸಮುದಾಯವಿರುವ ಕೆನಾಡದಲ್ಲಿ ಖಲಿಸ್ತಾನ ಹೋರಾಟ ತೀವ್ರಗೊಳ್ಳುತ್ತಲೇ ಇದೆ. ಇದೀಗ ಇದೇ ಖಲಿಸ್ತಾನ ಭಾರತ ಹಾಗೂ ಕೆನಡಾ ಸಂಬಂಧವನ್ನೇ ಹಳಸಿದೆ.  ಇದರ ನಡುವೆ ಭಾರತದ ನಿವೃತ್ತ ರಾ ಅಧಿಕಾರಿ ದಾಖಲೆ ಸಮೇತ ನೀಡಿದ ಕೆಲ ಸ್ಫೋಟಕ ಮಾಹಿತಿ ಕಾಂಗ್ರೆಸ್‌ಗೆ ಮುಖವಾಡ ಬಯಲು ಮಾಡಿದೆ. ಖಲಿಸ್ತಾನ ಹೋರಾಟವನ್ನ ಸೃಷ್ಟಿಸಿದ್ದೇ ಕಾಂಗ್ರೆಸ್. ಉಗ್ರ ಬ್ರಿಂದನ್‌ವಾಲೆಗೆ ಇಂದಿರಾ ಗಾಂಧಿ ಹಣ ನೀಡಿ ತಮ್ಮ ರಾಜಕೀಯ ಉದ್ದೇಶ ಈಡೇರಿಕೆಗೆ ಬಳಸಿಕೊಂಡಿದ್ದರು. ಕಾಂಗ್ರೆಸ್ ನಾಯಕರಾದ ಕಮಲ್‌ನಾಥ್ ಹಾಗೂ ಸಂಜಯ್ ಗಾಂಧಿ ಮೂಲಕ ಉಗ್ರ ಬಿಂದ್ರನ್‌ವಾಲೆಗೆ ಹಣ ಸಂದಾಯವಾಗಿತ್ತು ಅನ್ನೋ ಮಾಹಿತಿಯನ್ನು ನಿವೃತ್ತ ರಾ ಅಧಿಕಾರಿ ಜಿಬಿಎಸ್ ಸಿಧು ಹೇಳಿದ್ದಾರೆ. ಎಎನ್ಐ ಸುದ್ಧಿ ಸಂಸ್ಥೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ಜಿಬಿಎಸ್ ಸಿಧು, ಖಲಿಸ್ತಾನ ಹೋರಾಟ ಹಾಗೂ ಕಾಂಗ್ರೆಸ್ ಕೈವಾಡ ಕುರಿತು ವಿಸ್ತಾರವಾಗಿ ಹೇಳಿದ್ದಾರೆ. ಖಲಿಸ್ತಾನ ಹೋರಾಟ ಸೃಷ್ಟಿಸಲು ಕಾಂಗ್ರೆಸ್‌ಗೆ ಹಲವು ರಾಜಕೀಯ ಕಾರಣಗಳಿತ್ತು. ಇದರಲ್ಲಿ ಜನತಾ ಪಾರ್ಟಿಯಿಂದ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಸರ್ಕಾರವನ್ನು ಬೀಳಿಸುವ ಉದ್ದೇಶವೂ ಅಡಗಿತ್ತು ಎಂದು ಜಿಬಿಎಸ್ ಸಿಧು ಹೇಳಿದ್ದಾರೆ.  ಆಪರೇಶನ್ ಬ್ಲೂ ಸ್ಟಾರ್‌ಗೆ 37ನೇ ವರ್ಷ; ಸ್ವರ್ಣ ಮಂದಿರದಲ್ಲಿ ಮತ್ತೆ ಹಾರಾಡಿದ ಖಲಿಸ್ತಾನ ಧ್ವಜ! ಖಲಿಸ್ತಾನ ಹೋರಾಟ ಕಾಂಗ್ರೆಸ್ ಸೃಷ್ಟಿಸಿದ್ದ ರಾಜಕೀಯ ದಾಳ. ಆದರೆ ಇದೇ ಹೋರಾಟ ಕಾಂಗ್ರೆಸ್‌ಗೆ ಮುಳ್ಳಾಯಿತು. ಇಷ್ಟೇ ಅಲ್ಲ ಭಾರತದ ಸೌರ್ವಭೌಮತ್ವ ಹಾಗೂ ಐಕ್ಯತೆಗೆ ಈಗಲೂ ಧಕ್ಕೆಯಾಗುತ್ತಿದೆ.  ಅಕ್ಬರ್ ರೋಡ್ 1 ಇಂದಿರಾ ಗಾಂಧಿಯಾ ಗೃಹ ಕಚೇರಿಯಾಗಿದ್ದರೆ, ಸಫ್ದರ್‌ಜಂಗ್ ರೋಡ್ ಇಂದಿರಾ ಗಾಂಧಿಯ ನಿವಾಸವಾಗಿತ್ತು. ಇವೆರಡು ಅಕ್ಕಪಕ್ಕದಲ್ಲಿತ್ತು. ಅಧಿಕೃತ ಕಚೇರಿ ಹಾಗೂ ನಿವಾಸದಲ್ಲೇ ಖಲಿಸ್ತಾನ ಹೋರಾಟ ರೂಪುರೇಷೆ ಸಿದ್ದವಾಗಿತ್ತು. ಈ ರೂಪುರೇಶೆಯಲ್ಲಿ ಕಮಲನಾಥ್ ಹಾಗೂ ಸಂಜಯ್ ಗಾಂಧಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಜಿಬಿಎಸ್ ಸಿಧು ಹೇಳಿದ್ದಾರೆ. ಹೊಸ ವಿಚಾರ ಸೃಷ್ಟಿಸಿ ಭಾರತದ ಹಿಂದೂಗಳಲ್ಲಿ ಸೌರ್ವಭೌಮತ್ವ ಹಾಗೂ ಐಕ್ಯತೆ ಆತಂಕ ಹುಟ್ಟಿಸುವ ಅನಿವಾರ್ಯತೆಗೆ ಕಾಂಗ್ರೆಸ್ ಇಳಿದಿತ್ತು. ಇದರ ಹಿಂದೆ ದೇಸಾಯಿ ಸರ್ಕಾರವನ್ನು ಪತನಗೊಳಿಸುವುದು ಸೇರಿದಂತೆ ಹಲವು ಅಜೆಂಡಾಗಳಿತ್ತು. ಹೀಗಾಗಿ ಸಿಖ್ ಸಮುದಾಯಕ್ಕೆ ಪ್ರತ್ಯೇಕ ರಾಜ್ಯ ಖಲಿಸ್ತಾನ ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್ ರೆಡಿ ಮಾಡಿತ್ತು. ಆ ಸಮಯದಲ್ಲಿ ಖಲಿಸ್ತಾನ ಹೋರಾಟ ಅನ್ನೋದು ಇರಲೇ ಇಲ್ಲ. ಇದು ಕಾಂಗ್ರೆಸ್ ಸೃಷ್ಟಿಸಿದ ಹೋರಾಟವಾಗಿತ್ತು.    #WATCH | Former special secretary, R&AW GBS Sidhu says, “…At that time, the method used was Bhindranwale Khalistan. So they will use Bhindranwale to scare the Hindus & a new issue will be created of Khalistan which was non-existent at that time. So that larger population of… pic.twitter.com/5of3QIJxHb — ANI (@ANI) September 19, 2023   ಈ ಸಮಯದಲ್ಲಿ ನಾನು ಕೆನಡಾದಲ್ಲಿದ್ದೆ. ಈ ವೇಳೆ ಕನಾಡದಲ್ಲಿನ ಸಿಖ್ ಸಮುದಾಯದಲ್ಲಿ ಚರ್ಚೆ ಶುರುವಾಗಿತ್ತು.  ಕಾಂಗ್ರೆಸ್ ಯಾಕೆ ಬಿಂದ್ರನ್‌ವಾಲೆ ಜೊತೆ ಸಲುಗೆಯಿಂದ ಇದೆ. ರಹಸ್ಯ ಮಾತುಕತೆಗಳನ್ನು ನಡೆಸುತ್ತಿದೆ ಅನ್ನೋ ಚರ್ಚೆಗಳು ಶುರುವಾಗಿತ್ತು.  ಸಿಖ್ ಸಮುದಾಯದಿಂದ ಭಾರತದ ಹಿಂದೂಗಳಿಗೆ ಆತಂಕವಿದೆ ಅನ್ನೋದನ್ನು ಕಾಂಗ್ರೆಸ್ ಸೃಷ್ಟಿಸಲು ಪ್ರಖರ ಸಂತನನ್ನು ನೇಮಕ ಮಾಡಲು ಕಾಂಗ್ರೆಸ್ ಬಯಸಿತ್ತು. ಇದಕ್ಕಾಗಿ ಇಬ್ಬರು ಸಿಖ್ ಸಂತರನ್ನು ಸಂದರ್ಶನ ಮಾಡಲಾಗಿತ್ತು. ಇದರಲ್ಲಿ ಓರ್ವ ಸಂತ ಕಾಂಗ್ರೆಸ್ ಉದ್ದೇಶ ಈಡೇರಿಸಲು ಹಿಂದೇಟು ಹಾಕಿದ್ದರು. ಆದರೆ ಬಿಂದ್ರನ್‌ವಾಲೆ  ಕಾಂಗ್ರೆಸ್ ಬಿಡ್ಡಿಂಗ್ ಸ್ವೀಕರಿಸಿದರು. ಆಪರೇಶನ್ 1 ಗ್ರೂಪ್‌ನಲ್ಲಿ ಕಾಂಗ್ರೆಸ್‌ನ ಕೆಲವೇ ಕೆಲವು ನಾಯಕರಿದ್ದರು. ಮುಖ್ಯವಾಗಿ ಇಂದಿರಾ ಗಾಂಧಿ, ಕಮಲನಾಥ್ ಹಾಗೂ ಸಂಜಯ್ ಗಾಂಧಿ. ಈ ಆಪರೇಶನ್ 1 ಹೆಸರಿನಲ್ಲಿ ಖಲಿಸ್ತಾನ ಹೋರಾಟದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕಮಲನಾಥ್ ಹಾಗೂ ಸಂಜಯ್ ಗಾಂಧಿ ದೊಡ್ಡ ಮೊತ್ತವನ್ನು ಬಿಂದ್ರನವಾಲೆಗೆ ತಲುಪಿಸಿದ್ದರು.    ಆಪರೇಷನ್‌ ಬ್ಲೂ ಸ್ಟಾರ್‌ ಮಾಹಿತಿ ಬಹಿರಂಗಕ್ಕೆ ಬ್ರಿಟನ್‌ ಕೋರ್ಟ್‌ ಆದೇಶ ಪಂಜಾಬ್‌ನಲ್ಲಿ ಅಕಾಲಿ ದಳ ಹಾಗೂ ಜನತಾ ಪಾರ್ಟಿ ಸರ್ಕಾರವನ್ನು ಬೀಳಿಸುವ ಜೊತೆಗೆ ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರವನ್ನು ಪತನಗೊಳಿಸಲು ಸಂಜಯ್ ಹಾಗೂ ಕಮಲನಾಥ್ ಆಪರೇಶನ್ 1 ಮೂಲಕ ತಯಾರಿ ನಡೆಸುತ್ತಿದ್ದರು. ಬಿಂದ್ರನ್‌ವಾಲೆ ಖಲಿಸ್ತಾವನ್ನು ಕೇಳೇ ಇಲ್ಲ. ಆತನ ತನ್ನ ಬದುಕಿನಲ್ಲಿ ಖಲಿಸ್ತಾನ ಹೋರಾಟ ಮಾಡುವ ಕುರಿತು ಆಲೋಚನೆ ಮಾಡಿರಲಿಲ್ಲ. ಆದರೆ ಬಿಬಿ(ಇಂದಿರಾ ಗಾಂಧಿ) ನನ್ನ ಜೇಬು ತುಂಬಿಸಿದ ಬಳಿಕ ನಾನು ಇಲ್ಲ ಎಂದು ಹೇಗೆ ಹೇಳಲಿ ಎಂದು ಬಿಂದ್ರನ್‌ವಾಲೆ ಎಂದಿದ್ದರು. ಧಾರ್ಮಿಕ ಕಾರಣಕ್ಕಾಗಿ ಬಿಂದ್ರನ್‌ವಾಲೆಯನ್ನು ಬಳಸಿಕೊಳ್ಳುವುದು ಕಾಂಗ್ರೆಸ್ ಉದ್ದೇಶವಾಗಿರಲಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲೇ ತಂತ್ರ ಹೆಣೆಯಲಾಗಿತ್ತು. ಇದೇ ವೇಳೆ 1978ರಲ್ಲಿ ಝೈಲ್ ಸಿಂಗ್ ನೇತೃತ್ವದ ಗುಂಪು ದಲ್ ಖಲ್ಸಾ ಖಲಿಸ್ತಾನ ಹೋರಾಟ ಆರಂಭಿಸಿತ್ತು. ಇದರ ಮೊದಲ ಸಭೆ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು. ಈ ಹೊಟೆಲ್ ಬಿಲ್ 600 ರೂಪಾಯಿಯನ್ನು ಝೈಲ್ ಸಿಂಗ್ ಪಾವತಿ ಮಾಡಿದ್ದರು. 2 ದಿನದ ಬಳಿಕ ದಲ್ ಖಾಲ್ಸಾ ಗ್ರೂಪ್ ಸುದ್ದಿಗೋಷ್ಠಿ ನಡೆಸಿ ನಮ್ಮ ಗುರಿ ಸ್ವತಂತ್ರ ಖಲಿಸ್ತಾನ ರಾಷ್ಟ್ರ ಎಂದು ಘೋಷಣೆ ಮಾಡಿತ್ತು. ಈ ಕುರಿತು ಇಂಚಿಂಚು ಮಾಹಿತಿಯನ್ನು ಜಿಬಿಎಸ್ ಸಿಧು ಹೇಳಿದ್ದಾರೆ.  

  • ಕಾವೇರಿ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಏನ್‌ ವಾದ ಮಾಡ್ತೀರಿ? ಮಾಜಿ ಸಿಎಂ ಬೊಮ್ಮಾಯಿ
    on September 19, 2023 at 10:11 am

    ಬೆಂಗಳೂರು (ಸೆ.19): ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡುವ ಮೂಲಕ ರಾಜ್ಯದ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸಿಡಬ್ಲುಎಂಎ ಆದೇಶದಂತೆ ನೀರು ಬಿಡುವುದಾದರೆ ಸುಪ್ರೀಂ ‌ಕೋರ್ಟ್ ನಲ್ಲಿ ವಾದ ಮಾಡಲು ಏನಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ  ಸೆ.12 ರ ನಂತರ ನೀರು  ತಮಿಳುನಾಡಿಗೆ ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೊರ್ಟ್  ಮುಂದೆ ಅಪಿಡವಿಟ್ ಹಾಕಿದೆ‌.  ಅದಕ್ಕೆ ತಾವು ಬದ್ದರಾಗಿರಬೆಕಲ್ಲ. ಸರ್ಕಾರದ ಅಪಿಡವಿಟ್ ಅಂದರೆ ಸುಮ್ಮನೆ ಅಲ್ಲ. ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಮುಂದೆ ತಾನೇ ಸುಳ್ಳು ಹೇಳುತ್ತಿದೆ ಎಂದಾಯಿತು. ಉಪ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರು ನಾನು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ ಎಂದು ಹೇಳಿದ್ದಾರೆ. ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೇನು ಆಗುವುದಿಲ್ಲ. ಅದರ ಅಗತ್ಯ ನನಗಿಲ್ಲ ಎಂದರು.  ಸರ್ಕಾರದ ನಡೆ ರಾಜ್ಯದ ರೈತರನ್ನು, ಕಾವೇರಿ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ‌. ರಾಜ್ಯದ ಹಿತ ದೃಷ್ಟಿಯಿಂದ ನಾನು ಸಲಹೆ ನೀಡಿದ್ದೇನೆ. ಸರ್ಕಾರ ನಮ್ಮ ಸಲಹೆಯನ್ನು ಸ್ವೀಕರಿಸಲು ಸಿದ್ದವಿಲ್ಲ.  ಸರ್ಕಾರ ನಡೆಸುವವರಿಗೆ ಜವಾಬ್ದಾರಿ, ಅರಿವು ಇರಬೇಕು. ವಕೀಲರು ಯಾವಾಗಲೂ ನೀರು ಬಿಡುವಂತೆ ಸಲಹೆ ನಿಡುತ್ತಾರೆ. ನಾವು ಅದನ್ನು ಬದಲಾಯಿಸಿದ್ದೇವು. ನಮ್ಮ ಅವಧಿಯಲ್ಲಿ ರಾತ್ರೋರಾತ್ರಿ ನೀರು ಬಿಟ್ಟಿಲ್ಲ.  ನೀವು ಸಿಡಬ್ಲುಎಂಎ ಆದೇಶ ಪಾಲನೆ ಮಾಡಿದ ಮೇಲೆ ಸುಪ್ರೀಂ ಕೋರ್ಟ್ ಮುಂದೆ ಹೇಳುವುದೇನಿದೆ ಎಂದು ಪ್ರಶ್ನಿಸಿದರು.  ದಾರಿ ತಪ್ಪಿಸುವ ಕೆಲಸ: ಈಗ ಪ್ರಧಾನಿ ಬಳಿ ಹೋಗುವುದರಲ್ಲಿ ಅರ್ಥವಿಲ್ಲ‌. 1990 ಮುಂಚೆಯೇ ಈ ವಿಚಾರ  ಪ್ರಧಾನಿ ಬಳಿ ಚರ್ಚೆಯಾಗಿದೆ. ಈಗ ಅಲ್ಲಿ ಚರ್ಚೆ ಅಗತ್ಯವಿಲ್ಲ. ಸುಮ್ಮನೆ ರಾಜ್ಯದ ಜನರ ದಾರಿ ತಪ್ಪಿಸಲು ರಾಜ್ಯ ಸರ್ಕಾರ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದೆ. ನಮ್ಮ ವಕೀಲರು ತಮಿಳುನಾಡಿನ ಅಣೆಕಟ್ಟುಗಳಲ್ಲಿನ ನೀರಿನ ವಸ್ತುಸ್ಥಿತಿ,  ಅವರು ಬಳಕೆ ಮಾಡಿರುವ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡುವ ಕೆಲಸ ಮಾಡದಿದ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ‌. ರಾಜ್ಯದ ಪರ ವಕೀಲರು ಮೊದಲಿನಿಂದಲು ಇದ್ದಾರೆ. ನಮ್ಮ ಅವಧಿಯಲ್ಲಿಯೂ ಅವರೇ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆ ಕೊಡಲು ನಾವು ಸಿದ್ದರಿದ್ದೇವೆ‌. ಅವರು ಸಲಹೆ ತೆಗೆದುಕೊಳ್ಳಲು ಸಿದ್ದರಿಲ್ಲದಿದ್ದರೆ ಏನು ಮಾಡುವುದು ಎಂದರು. ತಮಿಳುನಾಡು ಸಹಕರಿಸುವುದಿಲ್ಲ: ಇನ್ನು ಮಾಜಿ ಪ್ರಧಾನಿ ದೇವೆಗೌಡರು ನ್ಯಾಯಾಲಯದ ಹೊರಗೆ ಈ ವಿಷಯ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ನೀಡಿರುವ ಸಲಹೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾತುಕತೆಗೆ ತಮಿಳುನಾಡು ಸಹಕಾರ ನೀಡುವುದಿಲ್ಲ. ಮೊದಲಿನಿಂದಲೂ ಅವರು ಅಸಹಕಾರ ತೋರುತ್ತಲೇ ಬಂದಿದ್ದಾರೆ. ತಮಿಳುನಾಡು ಸಂಸದರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ನಮ್ಮ ಸಂಸತ್ ಸದಸ್ಯರು ಕೇಂದ್ರ ನಿರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸೂಚಿಸಿದ್ದೇನೆ ಎಂದು ಹೇಳಿದರು‌. ಮಹಿಳಾ ಮೀಸಲಾತಿ ಕ್ರಾಂತಿಕಾರಿ ನಿರ್ಧಾರ: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ  ವಿಧೇಯಕ್ಕೆ ಒಪ್ಪಿಗೆ ನೀಡಿರುವುದು ಒಂದು ಕ್ರಾಂತಿಕಾರಿ ನಿರ್ಣಯ. 2009 ರಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಿತ್ತು. ಆದರೆ, ಲೋಕಸಭೆಯಲ್ಲಿ ಯುಪಿಎ ಸದಸ್ಯ ಪಕ್ಷಗಳೇ ಒಪ್ಪಿರಲಿಲ್ಲ. ಜನಸಂಖ್ಯೆಯಲ್ಲಿ  ಶೇ 50% ರಷ್ಟಿರುವ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿರುವುದು ಒಂದು ಕ್ರಾಂತಿಕಾರಕ ನಡೆ, ಕಾಂಗ್ರೆಸ್ ಇದರ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವುದು ವಿಪರ್ಯಾಸ. ಕೇವಲ ಬಿಲ್  ಸಿದ್ದಪಡಿಸುವುದು ಮಾತ್ರವಲ್ಲ ಎಲ್ಲ ಪಕ್ಷಗಳನ್ನು ಒಪ್ಪಿಸಿ ಬಿಲ್ ಪಾಸ್ ಮಾಡುವುದು ಮುಖ್ಯ. ಕೇಂದ್ರ ಸರ್ಕಾರ ಈಗ ಎಲ್ಲರ ಒಪ್ಪಿಗೆ ಪಡೆದು ಕಾಯ್ದೆಯಾಗಿ ಜಾರಿಗೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

  • ಬಟ್ಟೆ ಹಾಕಿದ್ರು ಟ್ರೋಲ್ ಹಾಕ್ದೆ ಇದ್ರೂ ಟ್ರೋಲ್: ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ದರ್ಶನ ಪಡೆದ ಉರ್ಫಿ
    on September 19, 2023 at 9:54 am

    ಉರ್ಫಿ ಜಾವೇದ್‌, ತನ್ನದೇ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಚ್‌ಚಲ್‌ ಎಬ್ಬಿಸುತ್ತಿರುವ ಚೆಲುವೆ. ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ. ಉರ್ಫಿ ಜಾವೇದ್‌, ತನ್ನದೇ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಚ್‌ಚಲ್‌ ಎಬ್ಬಿಸುತ್ತಿರುವ ಚೆಲುವೆ. ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ. ಪ್ರತಿಬಾರಿಯೂ ಅರೆಬರೆ ಬಟ್ಟೆಯ ಕಾರಣಕ್ಕೆ ಟ್ರೋಲ್ ಆಗುವ ಉರ್ಫಿ ಈ ಬಾರಿ ಬಟ್ಟೆ ಧರಿಸಿರುವ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಮೈ ತುಂಬಾ ಬಟ್ಟೆ ತೊಟ್ಟ ಉರ್ಫಿಯ ನೋಡಿದ ಜನ ನಿಜಕ್ಕೂ ತಾವು ಶಾಕ್ ಆಗಿದ್ದಾಗಿ ಕಾಮೆಂಟ್ ಮಾಡಿದ್ದಾರೆ.  ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬ ಜೋರಾಗಿದ್ದು, ಉರ್ಫಿ ಜಾವೇದ್‌ ಹಾಗೂ  ನಟ ಪ್ರತೀಕ್ ಸೆಜ್ಪಾಲ್ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದರು. ಅಲ್ಲದೇ ದೇಗುಲದ ಹೊರಭಾಗದಲ್ಲಿ ಪಪಾರಾಜಿ ಗಳಿಗೆ ಪೋಸ್‌ ನೀಡಿದರು.  ಉರ್ಫಿ ಜಾವೇದ್‌ ಹಾಗೂ  ನಟ ಪ್ರತೀಕ್ ಸೆಜ್ಪಾಲ್ ಇವರಿಬ್ಬರು ಹಿಂದಿ ಬಿಗ್‌ಬಾಸ್‌ ಒಟಿಟಿ ಸೀಸನ್‌ ಒಂದರಿಂದಲೂ ಪರಸ್ಪರ ಪರಿಚಿತರಾಗಿದ್ದು, ಇಬ್ಬರೂ ಆಗಿನಿಂದಲೂ ಸ್ನೇಹಿತರಾಗಿದ್ದಾರೆ.  ಈ ವೇಳೆ ಉರ್ಫಿಯ ಬಟ್ಟೆ ಮಾತ್ರವಲ್ಲದೇ ಆಕೆ ಧರಿಸಿದ ಗೋಲ್ಡನ್‌ ಪ್ರೇಮ್‌ನ ವಿಭಿನ್ನ ಶೈಲಿಯ ಕನ್ನಡಕ ಎಲ್ಲರ ಗಮನ ಸೆಳೆಯಿತು. ಕೆಂಪು ಬಣ್ಣದ ಸಂಪ್ರದಾಯಿಕ ಧಿರಿಸು ಧರಿಸಿದ್ದ ಉರ್ಫಿ ಹೆಗಲಿನ ಸುತ್ತ ಶಾಲು ಧರಿಸಿದ್ದರು, ಇದರ ಜೊತೆಗೆ ಅವರು ಹಾಕಿದ್ದ ಈ ಕನ್ನಡಕ ಎಲ್ಲರನ್ನು ಸೆಳೆದಿದ್ದು, ಮುಖಕ್ಕೆ ಹಾಕಿದ ಆಭರಣದಂತೆ ಕಾಣಿಸುತ್ತಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಉರ್ಫಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಉರ್ಫಿ ವಿಚಿತ್ರ ಹಾಗೂ ವಿಲಕ್ಷಣ ಧಿರಿಸು ಧರಿಸುವುದಕ್ಕೆ ಖ್ಯಾತಿ ಗಳಿಸಿದ್ದು, ಇವರು ತಮ್ಮ ಧಿರಿಸಿಗಾಗಿ ಬಳಸದ ವಸ್ತುಗಳಿಲ್ಲ. ಉರ್ಫಿ ಮೈ ತುಂಬಾ ಬಟ್ಟೆ ಧರಿಸಿರುವುದಕ್ಕೆ ಅನೇಕರು ಶ್ಲಾಘನೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಉರ್ಫಿ ಜಾವೇದ್ ಫ್ಯಾಶನ್ ಊಹೆಗೂ ನಿಲುಕದ್ದು. ಪ್ರತಿ  ಭಾರಿ ಹೊಸ ಹೊಸ ಫ್ಯಾಶನ್ ಮೂಲಕ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಅವರು ಜೀವಂತ ಮೀನುಗಳಿರುವ ಅಕ್ವೇರಿಯಂ ಬ್ರಾ ಧರಿಸಿ ಸುದ್ದಿಯಾಗಿದ್ದರು.  ಪ್ರತಿ ಭಾರಿ  ಹೊಸ ಹೊಸ ಫ್ಯಾಶನ್ ಮೂಲಕ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸುತ್ತಾರೆ. ಉರ್ಫಿಯ ಉಡುಗೆ ತೊಡಗೆ ಸಖತ್  ಹಾಟ್ ಮಾತ್ರವಲ್ಲ, ಅದರಾಚೆಗಿನ ಲೋಕವನ್ನು ತೆರೆದಿಡುತ್ತದೆ. ಉರ್ಫಿ ಜಾವೇದ್ ಈ ರೀತಿಯ ಭಿನ್ನ ಫ್ಯಾಶನ್ ಇದೇ ಮೊದಲಲ್ಲ. ಇತ್ತೀಚೆಗೆ ಟಾಯ್ಸ್ ಕಾರುಗಳ ಮೂಲಕ ಬ್ರಾ ಮಾಡಿಕೊಂಡು ಫೋಸ್ ನೀಡಿದ್ದರು. ಉರ್ಫಿಯ ಒಂದೊಂದು ಅವತರವೂ ಭಿನ್ನ.  ಒಂದೊಂದು ಫ್ಯಾಶನ್ ಕೂಡ ಹಾಟ್ ಆಗಿರುತ್ತದೆ. 

  • ಗಣೇಶ ಚತುರ್ಥಿಯಲ್ಲೂ ಚಂದ್ರಯಾನಕ್ಕೆ ಗೌರವ; ರಾಕೆಟ್‌ನಲ್ಲಿ ಕುಳಿತು ಹೊರಟಂತಿರುವ ಗಣಪ ಪ್ರತಿಷ್ಠಾಪನೆ!
    on September 19, 2023 at 9:52 am

    ಕುಕನೂರು (ಸೆ.19): ಕೊಪ್ಪಳ ಜಿಲ್ಲೆಯ ಕುಕನೂರಿನ ಬನ್ನಿಕೊಪ್ಪ ಗ್ರಾಮದಲ್ಲಿ ರಾಕೆಟ್ ಮಾದರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಚಂದ್ರಯಾನ 3 ಉಡಾವಣೆ ಮಾದರಿಯಲ್ಲಿರುವ ಗಣೇಶಮೂರ್ತಿ. ರಾಕೆಟ್‌ನಲ್ಲಿ ಕುಳಿತು ಚಂದ್ರಯಾನದತ್ತ ಹೊರಟಿರುವಂತೆ ನಿರ್ಮಿಸಲಾಗಿದೆ. ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆ ಇದೇ ಮಾದರಿ ರೀತಿಯ ಗಣೇಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವ ಬನ್ನಿಕೊಪ್ಪ ಗ್ರಾಮಸ್ಥರು. ತೊಂಟದಾರ್ಯ ಪ್ರಗತಿ ಶೀಲ ಯುವಕ ಮಂಡಲದಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ. ಗ್ರಾಮದ ವಿಜ್ಞಾನ ಶಿಕ್ಷಕರಾದ ಶಾಂತವೀರ ಎಂಬ ಯುವಕ ಯುವಕ ಮಂಡಲದ ಮಿತ್ರರೊಡನೆ ಸೇರಿ ವೈಜ್ಞಾನಿಕ ಮನೋಭಾವನೆ ನಿಟ್ಟಿನಲ್ಲಿ, ಕಾಗದ, ರಟ್ಟು ಮತ್ತು ತಟ್ಟುಗಳನ್ನು ಬಳಸಿ ಕೊಂಡು ಸುಂದರ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

  • ಗಣೇಶ ಹಬ್ಬದಂದೇ ಏರಿಯಾಗೆ ನುಗ್ಗಿದ ದುನಿಯಾ ವಿಜಿ! ವಿಘ್ನೇಶ್ವರನ ಹಬ್ಬದಂದು ಏನಾಯ್ತು?
    on September 19, 2023 at 9:46 am

    ಸ್ಯಾಂಡಲ್‌ವುಡ್ ಫೈಟರ್, ಬೆಳ್ಳಿತೆರೆಯ ಮಾಸ್ ಪಂಟರ್ ಹಾಗೂ ಬಾಕ್ಸ್‌ ಆಫೀಸ್‌ ಹಂಟರ್ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಭೀಮ ಸಿನಿಮಾದ ವಿಶೇಷ ಹಾಡನ್ನು ಗಣೇಶ ಹಬ್ಬದಂದು ರಿಲೀಸ್ ಮಾಡಲಾಗಿದೆ. ವಿಜಯ್ ಡೈರೆಕ್ಷನ್‌ನಲ್ಲಿ ಸಿಕ್ಕಾಪಟ್ಟೆ ಡಿಫರೆಂಟ್ ಅಂತ ಮತ್ತೆ ಪ್ರೂವ್ ಮಾಡಿದ್ದಾರೆ. ಹೇಗಿದೆ ಹಾಡು ಈ ವಿಡಿಯೋ… ಬಿಗ್ ಬಾಸ್‌ ಮನೆಯಲ್ಲಿ ಶ್ವೇತಾ?; ಹಾಗಿದ್ರೆ ‘ಲಕ್ಷಣ’ಗೆ ಬೈ ಬೈ!

  • ಪತಿಯ ಬರ್ತ್​ಡೇಗೆ ರೀಲ್​, ಮೈಕ್​, ಹೆಡ್​ಫೋನ್ ಇರೋ ಕೇಕ್​​: ನಿವೇದಿತಾರಿಗೆ ಭೇಷ್​ ಎಂದ ಫ್ಯಾನ್ಸ್​!
    on September 19, 2023 at 9:38 am

    ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಕೆಲ ತಿಂಗಳಿನಿಂದ ಸಕತ್​ ಸುದ್ದಿಯಲಿದ್ದಾರೆ. ಇನ್ನು ಇವರ ಪತಿ ಚಂದನ್​ ಶೆಟ್ಟಿ ಅವರ ವಿಷಯಕ್ಕೆ ಬರುವುದಾದರೆ,  ಚಂದನ್​ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ‘ಎಲ್ರ ಕಾಲೆಳೆಯುತ್ತೆ ಕಾಲ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್​ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ.  ‘ಎಲ್ರ ಕಾಲೆಳೆಯುತ್ತೆ ಕಾಲ’, ‘ಸೂತ್ರಧಾರಿ’ ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಹೊಸ ಚಿತ್ರಕ್ಕೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂದು ಹೆಸರಿಡಲಾಗಿದೆ. ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ಈ ಟೈಟಲ್​. ಈ ಹಿಂದೆ ಶ್ರೀಮುರಳಿ, ಅಕುಲ್ ಬಾಲಾಜಿ, ಶ್ರೀಕಿ ನಟಿಸಿದ್ದ ‘ಲೂಸ್‌ಗಳು’ ಸಿನಿಮಾವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ಅವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.   ಅದೇ ಇನ್ನೊಂದೆಡೆ,  ನಿವೇದಿತಾ ಗೌಡ  ಏನೇ ಮಾಡಿದ್ರೂ ಅದು ಸುದ್ದಿಯಾಗ್ತಾರೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಈ ಚಂದನವನದಲ್ಲಿ ನಟಿ ನಿವೇದಿತಾ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಇತ್ತೀಚೆಗಷ್ಟೇ ನೀರಿನ ಒಳಗೆ ಈ ಜೋಡಿ  ರೊಮ್ಯಾಂಟಿಕ್​ ಆಗಿ ಕಾಲ ಕಳೆದು ಅದರ ವಿಡಿಯೋ ಶೇರ್​ ಮಾಡಿದ್ದರು. ಇದಕ್ಕೆ ಲಕ್ಷಾಂತರ ಮಂದಿ ಲೈಕ್ಸ್​ ಮಾಡಿದ್ದರು. ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್​ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಕೆಲವರು  ಟೀಕೆ ಮಾಡಿದ್ದರೂ ಈ ಜೋಡಿಯ ಫ್ಯಾನ್ಸ್​ ಅಂತೂ ಫಿದಾ ಆಗಿದ್ದರು. ಇದರ ಬೆನ್ನಲ್ಲೇ ನಟಿ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಚಂದನ್​-ನಿವೇದಿತಾ ರೊಮ್ಯಾನ್ಸ್​ ವಿಡಿಯೋ: ಬೆಸ್ಟ್​ ಕಪಲ್ ಎನ್ನುತ್ತಲೇ ಉದ್ದ ಕೂದ್ಲು ಮಿಸ್ ಮಾಡ್ಕೊಂಡ ಫ್ಯಾನ್ಸ್! ಸದ್ಯ  ಚಂದನ್ ಶೆಟ್ಟಿ 2ನೇ ಸಿನಿಮಾ ಸೂತ್ರಧಾರ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಇದರ ನಡುವೆಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೊನ್ನೆ ಸೆಪ್ಟೆಂಬರ್​ 17ಎಂದು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದರ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ.  ಪತಿ ಚಂದನ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ನಿವೇದಿತಾ ಗೌಡ,  ಹ್ಯಾಪಿ ಬರ್ತ್​ ಡೇ ಬೇಬಿ ಎಂದು ಕೇಕ್ ಮೇಲೆ ಬರೆಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದು,  ನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ . ಯೂ ಆರ್​ ಮೈ ಬೆಸ್ಟ್​ ಎಂದಿರೋ ನಟಿ,  ನಾನು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತಲೇ ಇರುತ್ತೇನೆ ಹಾಗೂ ಕೊಂಚ ಕಿರಿಕಿರಿ ನೀಡುವೆ ಎಂದಿದ್ದರು.  ಇದೀಗ ಅವರ ಕೇಕ್​ ವಿಡಿಯೋ ಸಕತ್​ ವೈರಲ್​ ಆಗಿದೆ. ಇದಕ್ಕೆ ಕಾರಣ ಕೇಕ್​ ಮೇಲೆ ನಿವೇದಿತಾ ಅವರು ಚಿತ್ರದ ರೀಲ್ಸ್​, ಮೈಕ್​, ಹೆಡ್​ಫೋನ್​ ಇರೋ ಕೇಕ್​ ತಯಾರಿಸಿ ಅದರ ಮೇಲೆ ಚಂದನ ಶೆಟ್ಟಿಯವರ ಚಿಕ್ಕ ಮೂರ್ತಿ ಇಟ್ಟಿದ್ದಾರೆ. ಚಂದನ್​ ಅವರು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿರೋದ್ರಿಂದ ಈ ರೀತಿ ಕೇಕ್​ ತಯಾರಿಸಿದ್ದಾರೆ. ಇದಕ್ಕೆ ನೆಟ್ಟಿಗರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ನಿವೇದಿತಾ ಅವರ ತಲೆ ಎಂದರೆ ತಲೆ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್​!         View this post on Instagram                       A post shared by Niveditha Gowda 👑 (@niveditha__gowda)

  • ಹಿಂದೂ ಧಾರ್ಮಿಕ ಸ್ಥಳ ಅಂತರಗಂಗೆ ಬೆಟ್ಟದಲ್ಲಿ ಪಾಕಿಸ್ಥಾನ ಬಾವುಟ ಬಿಡಿಸಿದ ಪಾಪಿಗಳು
    on September 19, 2023 at 9:37 am

    ಕೋಲಾರ (ಸೆ.19): ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ವಿವಾದಾತ್ಮಕ ಘಟನೆ ನಡೆದಿದೆ. ಹಿಂದೂ ಧಾರ್ಮಿಕ ಸ್ಥಳವಾದ ಐತಿಹಾಸಿಕ ಅಂತರಗಂಗೆ ಬೆಟ್ಟದ ಬೃಹತ್‌ ಬಂಡೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕಿಸ್ಥಾನ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ. ಅದರ ಮೇಲೆ 786 ಎಂಬ ಸಂಖ್ಯೆಯ ಜೊತೆಗೆ ಉರ್ದು ಬರಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ. ಹೌದು, ಹಿಂದೂಗಳ ಪವಿತ್ರ ಸ್ಥಳವೆಂದೇ ಹೇಳಲಾಗುವ ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಈಗ ಧಾರ್ಮಿಕ ವಿಕೃತಿಯನ್ನು ಮೆರೆಯಲಾಗಿದೆ. ಅಂತರಗಂಗೆ ಬೆಟ್ಟದಲ್ಲಿ ಶ್ರೀ ವಿಶ್ವನಾಥಸ್ವಾಮಿಯ ದೇವಸ್ಥಾನವಿದೆ. ಇಲ್ಲಿರುವ ನಂದಿ ವಿಗ್ರಹದ ಬಾಯಲ್ಲಿ ಬೇಸಿಗೆಯಲ್ಲೂ ನೀರು ಬರುವ ಪುಣ್ಯ ಕ್ಷೇತ್ರವಾಗಿದೆ. ಈ ದೇವಸ್ಥಾನದ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿದ್ದು, ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಇಲ್ಲಿ ಕೆಲವು ಕಿಡಿಗೇಡಿಗಳು ಬಂದು ಬೃಹತ್‌ ಬಂಡೆಯ ಮೇಲೆ ಮುಸ್ಲಿಂಮರ ಹಾಗೂ ಭಾರತದ ವಿರೋಧಿ ದೇಶವಾದ ಪಾಕಿಸ್ತಾನದ ಧ್ವಜವನ್ನು ಹೋಲುವ ಬಾವುಟದ ಚಿತ್ರವನ್ನು ಬಿಡಿಸಿದ್ದಾರೆ. ಕರ್ನಾಟಕ ಜನತೆಗೆ ಮತ್ತೊಂದು ದರ ಏರಿಕೆ ಶಾಕ್‌: ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ಹೆಚ್ಚಳ! ಇನ್ನು ಬೃಹತ್‌ ಬಂಡೆಯ ಮೇಲೆ ಹಸಿರು ಬಣ್ಣ ಹಾಗೂ ಬಿಳಿ ಬಣ್ಣವನ್ನು ಬಳಸಿ ಪಾಕಿಸ್ತಾನ ಧ್ವಜ ಬಿಡಿಸಲಾಗಿದ್ದು, ಅದರ ಮೇಲೆ 786 ಎಂದು ಸಂಖ್ಯೆಯನ್ನು ಬರೆದಿದ್ದಾರೆ. ಜೊತೆಗೆ, ಕೆಲವು ಉರ್ದು ಪದಗಳನ್ನು ಕೂಡ ಬರೆದಿದ್ದಾರೆ. ಇನ್ನು ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಬಂಡೆಯ ಧ್ವಜದ ಚಿತ್ರದಬಳಿ ಬರೆದ ಉರ್ದು ಬರಹದ ಅರ್ಥ ಏನೆಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ. ನಂತರ, ಧಾರ್ಮಿಕ ಕಿಚ್ಚು ಹೊತ್ತಿಸುವಂತಹ ಹಾಗೂ ಪರಿಸರದಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

  • ಲೋಕಸಭೆಯಲ್ಲಿ ಮಂಡನೆಯಾಯ್ತು ಮಹಿಳಾ ಮೀಸಲಾತಿ ಮಸೂದೆ: ದೇವರು ನನಗೆ ಅವಕಾಶ ಕೊಟ್ಟಿದ್ದಾರೆ ಎಂದ ಪ್ರಧಾನಿ ಮೋದಿ
    on September 19, 2023 at 9:33 am

    ನವದೆಹಲಿ (ಸೆಪ್ಟೆಂಬರ್‌ 19, 2023): ಸೋಮವಾರ ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಈ ಬೆನ್ನಲ್ಲೇ ಇಂದು ಈ ಮಹತ್ವದ ಬಿಲ್‌ ಮಂಡನೆ ಮಾಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಈ ನಡುವೆ, ಈ ಮಹಿಳಾ ಮೀಸಲಾತಿ ಬಿಲ್‌ ನಮ್ಮದು ಎಂದು ವಿಪಕ್ಷಗಳು ಕ್ರೆಡಿಟ್‌ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದು, ಈ ಹಿನ್ನೆಲೆ ಗದ್ದಲ ಗಲಾಟೆಯ ನಡುವೆಯೇ ಬಿಲ್‌ ಮಂಡನೆಯಾಗಿದೆ. Nari Shakti Vandan Adhiniyam ಎಂದು ಈ ಬಿಲ್‌ ಅನ್ನು ಕರೆಯಲಾಗಿದೆ. ಆದರೆ, ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆಯಾಗಿದ್ದು, ಈ ಹಿನ್ನೆಲೆ ಈ ಬಿಲ್‌ ಬಹುತೇಕ ನಾಳೆ ಲೋಕಸಭೆಯಲ್ಲಿ ಪಾಸಾಗಲಿದೆ ಎನ್ನಲಾಗುತ್ತಿದೆ. ಇದನ್ನು ಓದಿ: ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯ, ಮಹಿಳಾ ಮೀಸಲಾತಿ ಮಸೂದೆಗೆ ಗ್ರೀನ್ ಸಿಗ್ನಲ್? ಇನ್ನು, ಈ ಬಿಲ್‌ ಮಂಡನೆಗೂ ಮುನ್ನ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ “ಹೊಸ ಸಂಸತ್ ಕಟ್ಟಡದಲ್ಲಿ ಈ ಐತಿಹಾಸಿಕ ಸಂದರ್ಭದಲ್ಲಿ, ಸದನದ ಮೊದಲ ಕಲಾಪವಾಗಿ, ಎಲ್ಲಾ ಸಂಸದರು ಮಹಿಳಾ ಶಕ್ತಿಗಾಗಿ ಹೆಬ್ಬಾಗಿಲುಗಳನ್ನು ತೆರೆಯುವ ಪ್ರಾರಂಭವನ್ನು ಈ ನಿರ್ಣಾಯಕ ನಿರ್ಧಾರದಿಂದ ಮಾಡಲಾಗುತ್ತಿದೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಯ ನಮ್ಮ ಸಂಕಲ್ಪವನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸರ್ಕಾರವು ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು. “ಈ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರ ಸದಸ್ಯತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದೂ ಅವರು ಹೇಳಿದರು. “ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ಬಹಳ ಸಮಯದಿಂದ ನಡೆಯಿತು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರಲಿಲ್ಲ, ಮತ್ತು ಈ ಕಾರಣದಿಂದಾಗಿ ಈ ಕನಸು ಅಪೂರ್ಣವಾಗಿ ಉಳಿಯಿತು’’ ಎಂದು ಮೋದಿ ಹೇಳಿದರು. “ಇಂದು, ಇದನ್ನು ಮುಂದುವರಿಸಲು ದೇವರು ನನಗೆ ಅವಕಾಶವನ್ನು ನೀಡಿದ್ದಾನೆ … ನಮ್ಮ ಸರ್ಕಾರವು ಉಭಯ ಸದನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಇಂದು ಹೊಸ ಮಸೂದೆಯನ್ನು ತರುತ್ತಿದೆ” ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.  ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ! ಮಹಿಳಾ ಮೀಸಲಾತಿ ಮಸೂದೆ: ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದೆ. ಇದು  ಲೋಕಸಭೆ (ಸಂಸತ್ತಿನ ಕೆಳಮನೆ), ವಿಧಾನ ಸಭೆಗಳು (ರಾಜ್ಯ ಶಾಸಕಾಂಗ ಸಭೆಗಳು), ಮತ್ತು ದೆಹಲಿ ಅಸೆಂಬ್ಲಿಯಲ್ಲಿ 1/3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಮಹಿಳೆಯರ ಕೋಟಾದಲ್ಲಿ 1/3ರಷ್ಟು ಮೀಸಲಾತಿ ಸೀಟುಗಳನ್ನು ST ಅಥವಾ SC ಸಮುದಾಯದವರಿಗೆ ಹಂಚಿಕೆ ಮಾಡಬೇಕು. ಡೀಲಿಮಿಟೇಶನ್ ವ್ಯಾಯಾಮದ ನಂತರ ಅನುಷ್ಠಾನವಾಗುತ್ತದೆ. ಮೀಸಲಾತಿಯು 15 ವರ್ಷಗಳವರೆಗೆ ಪರಿಣಾಮಕಾರಿಯಾಗಿರಲು ಪ್ರಸ್ತಾಪಿಸಲಾಗಿದೆ.  

  • Bengaluru: ಟ್ರಾಫಿಕ್‌ ಜಾಮ್‌ನಲ್ಲೇ ಬಟಾಣಿ ಸಿಪ್ಪೆ ಸುಲಿದ ಮಹಿಳೆ, ಪೋಸ್ಟ್‌ ವೈರಲ್‌
    on September 19, 2023 at 9:28 am

    ಬೆಂಗಳೂರು.ಇಲ್ಲಿನ ಸುಂದರವಾದ ವಾತಾವರಣದಿಂದಾಗಿ ಜನರು ಈ ಮಹಾನಗರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬೆಂಗಳೂರು ಕಿಕ್ಕಿರಿದ ಟ್ರಾಫಿಕ್‌ನಿಂದಾಗಿ ಹೆಚ್ಚು ಫೇಮಸ್ ಆಗುತ್ತಿದೆ. ಇಲ್ಲಿನ ಸಂಚಾರ ದಟ್ಟಣೆಯಿಂದಾಗಿಯೇ ಜನರು ಈ ನಗರವನ್ನು ದ್ವೇಷಿಸಲು ತೊಡಗಿದ್ದಾರೆ. ಪೀಕ್ ಅವರ್‌ಗಳಲ್ಲಂತೂ ರಸ್ತೆ ವಾಹನಗಳಿಂದ ಕಿಕ್ಕಿರಿದು ತುಂಬುತ್ತದೆ. ಕ್ಯಾಬ್‌, ಆಟೋ ರಿಕ್ಷಾಗಳು ಸಹ ಲಭ್ಯವಾಗುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಉದ್ದೇಶಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲಾಗದೆ ತೊಂದರೆ ಅನುಭವಿಸುತ್ತಾರೆ. ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅರ್ಧಗಂಟೆಯ ದಾರಿ ಟ್ರಾಫಿಕ್‌ನಲ್ಲಿ ತಲುಪೋಕೆ ಒಂದು ಗಂಟೆ (One hour) ಹಿಡಿಯೋದು ಇದೆ. ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯವಾಗಿ ಅದೆಷ್ಟೇ ವ್ಯವಸ್ಥೆ ಮಾಡಿಕೊಂಡ್ರೂ ದಿನವಿಡೀ ಬೆಂಗಳೂರಿನ ರಸ್ತೆಗಳಲ್ಲಿ (Bengaluru road) ಟ್ರಾಫಿಕ್ ಅಬ್ಬರವಂತೂ ಕಡಿಮೆಯಾಗೋದೆ ಇಲ್ಲ. ಮೆಟ್ರೋ, ಕ್ಯಾಬ್‌ ಎಂದು ಅದೆಷ್ಟೇ ವ್ಯವಸ್ಥೆಯಿದ್ದರೂ ಅವ್ಯವಸ್ಥೆ ಹಾಗೆಯೇ ಇರುತ್ತದೆ. ಅರ್ಧ ಜೀವ್ನ ಟ್ರಾಫಿಕ್‌ನಲ್ಲೇ ಮುಗಿದು ಹೋಯ್ತಪ್ಪಾ ಅಂತ ಮಾತನಾಡಿಕೊಳ್ಳುವವರೂ ಇದ್ದಾರೆ.  Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ ಟ್ರಾಫಿಕ್‌ ಜಾಮ್‌ ​ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆ ಟ್ರಾಫಿಕ್ ಜಾಮ್ ಆದಾಗ ಯಾರಿಗೂ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂಥಾ ಸಂದರ್ಭದಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಈ ಹಿಂದೆ ಟೆಕ್ಕಿಯೊಬ್ಬ ಕಿಕ್ಕಿರಿದ ಟ್ರಾಫಿಕ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ ವಿಡಿಯೋ ವೈರಲ್ ಆಗಿತ್ತು. ಆ ನಂತರ ಬಿಎಂಟಿಸಿ ಡ್ರೈವರ್ ಲಂಚ್‌ಬಾಕ್ಸ್‌ನಿಂದ ಊಟ ಮಾಡೋ ಫೋಟೋ ಸಹ ವೈರಲ್ ಆಗಿತ್ತು. ಸದ್ಯ ಟ್ರಾಫಿಕ್‌ ಜಾಮ್‌ ​ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆಯ ಫೋಟೋ ವೈರಲ್ ಆಗಿದೆ. ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರಿಯಾ ಹೆಸರಿನ ಬಳಕೆದಾರರು ಕಾರಿನ ಸೀಟಿನಲ್ಲಿ ಇರಿಸಲಾದ ಸಿಪ್ಪೆ ಸುಲಿದ ಬಟಾಣಿಯ (Green peas) ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ‘ಟ್ರಾಫಿಕ್ ಜಾಮ್ ಆದಾಗ ಸಮಯದ ಸದುಪಯೋಗ’ ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social media) ಭಾರೀ ವೈರಲ್​ ಆಗಿದ್ದು, ಸುಮಾರು 50,000 ವೀವ್ಸ್ ಗಳಿಸಿದೆ. ಸುಮಾರು 100 ಕಾಮೆಂಟ್​​​​ಗಳು ಬಂದಿವೆ. ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರು: ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ್ರೆ ಕಾದಿದೆ ಬಿಗ್‌ ಶಾಕ್! ಪೋಸ್ಟ್ ವೈರಲ್‌, ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್ ಒಬ್ಬ ಬಳಕೆದಾರರು,  ‘ಬೆಂಗಳೂರಿನ ದಟ್ಟಣೆಯ ಟ್ರಾಫಿಕ್​​ ಪ್ರಯಾಣಿಸುವಾಗ ಕಲಿಯುವುದು, ಸಾಧಿಸುವುದು ಮತ್ತು ಬೆಳೆಯಲು ತುಂಬಾ ಇದೆ’ ಎಂದು ಕಾಮೆಂಟ್​​​​ ಮಾಡಿದ್ದಾರೆ. ಮತ್ತೊಬ್ಬರು, ‘ಇದನ್ನು ನನ್ನ ಬಾಸ್‌ಗೆ ಕಳುಹಿಸುತ್ತಿದ್ದೇನೆ’ ಎಂದಿದ್ದಾರೆ. ಮತ್ತೊಬ್ಬರು ಪ್ರಿಯಾ ಅವರನ್ನು ಸಮಯವನ್ನು ಬಳಸಿಕೊಂಡಿದ್ದಕ್ಕಾಗಿ ಶ್ಲಾಘಿಸಿದರು. ಇನ್ನೊಬ್ಬರು, ‘ಮೊಬೈಲ್ ಹೈಡ್ರೋಪೋನಿಕ್ಸ್ ಫಾರ್ಮ್‌ಗಳ ಕಲ್ಪನೆಯೊಂದಿಗೆ ಸ್ಟಾರ್ಟಪ್ ಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ. ಬೆಂಗಳೂರಿನ ಟ್ರಾಫಿಕ್ ಮಧ್ಯೆ ಸಿಲ್ಕ್‌ಬೋರ್ಡ್‌ನಿಂದ ವಾಹನ ಇಂದಿರಾನಗರ ತಲುಪುತ್ತಿದ್ದಂತೆ ಗಿಡಗಳು ಬೆಳೆಯುತ್ತವೆ’ ಎಂದು ಕಾಮೆಂಟ್ ಮಾಡಿದ್ದಾರೆ.  ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿದ್ದು, ಇದು ಬೆಂಗಳೂರಿನ ಟ್ರಾಫಿಕ್​ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ.  ‘ಸಮಯದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ’ ಎಂದು ಮತ್ತೋರ್ವ ಬಳಕೆದಾರರು ತಿಳಿಸಿದ್ದಾರೆ. ಅಂದಹಾಗೆ ವರದಿಯೊಂದರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್​​ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ.    Being productive during peak traffic hours 😑 pic.twitter.com/HxNJoveHwS — Priya (@malllige) September 16, 2023

  • ಬಿಗ್ ಬಾಸ್‌ ಮನೆಯಲ್ಲಿ ಶ್ವೇತಾ?; ಹಾಗಿದ್ರೆ ‘ಲಕ್ಷಣ’ಗೆ ಬೈ ಬೈ!
    on September 19, 2023 at 9:20 am

    ದೊಡ್ಡ ಮನೆಗೆ ಎಂಟ್ರಿ ಕೊಡಲಿದ್ದಾರೆ ಶ್ವೇತಾ. ಮಾಯಾಂಗಿನಿ ಆಟ ಆಡಲು ಯಾರೂ ಇಲ್ವಾ? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಸಖತ್ ಕಲರ್ ಫುಲ್ ಆಗಿ ಮಿಂಚುತ್ತಿರುವ ಶ್ವೇತಾ ಉರ್ಫ್‌ ಸುಕೃತಾ ನಾಗ್.  ಕೆಲವು ದಿನಗಳಿಂದ ಲಕ್ಷಣ ಸೀರಿಯಲ್ ಮುಗಿಯಲಿದೆ ಅದೇ ಸಮಯಕ್ಕೆ ಬಿಗ್ ಬಾಸ್ ಶುರುವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.  ಈಗ ನೋಡಿದರೆ ಬಿಗ್ ಬಾಸ್ ಸೀಸನ್ 10ಕ್ಕೆ ಶ್ವೇತಾ ಉರ್ಫ್‌ ಸುಕೃತಾ ನಾಗ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.  ಶ್ವೇತಾ ಪಾತ್ರದ ಮೂಲಕ ಸುಕೃತಾ ಸಖತ್ ಬೋಲ್ಡ್ ಆಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಆದರೆ ರಿಯಲ್ ಲೈಫ್‌ನಲ್ಲಿ ಹೇಗೆಂದೂ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ.   ಇನ್ನು ಸುಕೃತಾ ಕೆಲವು ದಿನಗಳ ಹಿಂದೆ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು. ಶೂಟಿಂಗ್, ಶಾಪಿಂಗ್, ಬ್ಯಾಕ್, ಲೈಫ್‌ಸ್ಟೈಲ್ ಹೇಗೆ ಡಿಫರೆಂಟ್ ವಿಚಾರಗಳ ಬಗ್ಗೆ ವಿಡಿಯೋ ಮಾಡುತ್ತಿದ್ದರು.  ಶಕುಂತಲಾ ದೇವಿಯನ್ನು ಹೇಗೆ ಗೊಂಬೆ ರೀತಿ ಆಟ ಆಡಿಸಿದ್ದಾಳೆ ಹಾಗೆ ಬಿಬಿ ಮನೆಯಲ್ಲೂ ಮಾಡುತ್ತಾಳೆ ಅಂತಾರೆ ನೆಟ್ಟಿಗರು. ಆದರೆ ಶ್ವೇತಾ ವಿರುದ್ಧ ಯಾರೆಲ್ಲಾ ಇರುತ್ತಾರೆ ಅನ್ನೋ ಪ್ರಶ್ನೆಯಾಗಿ ಉಳಿದಿದೆ. 

  • ಅಳುವ ಬಗ್ಗೆ ರಶ್ಮಿಕಾಗೆ ಅಮ್ಮನ ಪಾಠ: ಇಲ್ಲಸಲ್ಲದ ಅಡ್ವೈಸ್​ ಕೊಟ್ಟು ಜನರ ತಲೆಕೆಡಿಸಬೇಡಿ ಎಂದ ಫ್ಯಾನ್ಸ್​!
    on September 19, 2023 at 8:58 am

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ.  ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಆದರೂ ಇದ್ಯಾವುದಕ್ಕೂ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌… ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.     ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ನಾವು ಎಲ್ಲಿಯೇ ಹೋದರೂ ನಮ್ಮಿಬ್ಬರನ್ನು ಟ್ಯಾಗ್ ಮಾಡಿ ಹೇಳಲಾಗುತ್ತದೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ವಿಜಯ್, ರಶ್ಮಿಕಾ ಅನ್ನುತ್ತಾರೆ. ಸಿನಿಮಾ ರಿಲೀಸ್ ಟೈಮ್‌ನಲ್ಲಿ ಸಿನಿಮಾ ಬಗ್ಗೆಯೇ ಮಾತನಾಡಬೇಕು. ವರ್ಷಗಟ್ಟಲೇ ಚಿತ್ರಕ್ಕಾಗಿ ಕೆಲಸ ಮಾಡಲಾಗುತ್ತದೆ. ಅದರ ಕಥೆ ಏನಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು. ಶೀಘ್ರವೇ ಗುಡ್​ ನ್ಯೂಸ್​ ಎಂದ ವಿಜಯ್​ ದೇವಕೊಂಡ: ಇದು ರಶ್ಮಿಕಾ ಕೈ ಅಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್! ಇಂತಿಪ್ಪ ರಶ್ಮಿಕಾ ಅವರು ಈಗ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಮಾಜದ ಎದುರು ಅತ್ತರೆ ಆಗುವ ದುಷ್ಪರಿಣಾಮದ ಕುರಿತು ಅಮ್ಮ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.  ನೀನು ಯಾರ ಮುಂದೂ ಅಳಲು ಹೋಗಬೇಡ. ಅತ್ತರೆ ಜನರ ಮುಂದೆ ನೀನು ಚಿಕ್ಕವಳಾಗ್ತಿಯಾ. ಏನೇ ಸರಿ ಇಲ್ಲ ಎಂದು ಎನಿಸಿದರೂ ಸರಿ ಇದ್ದವರ ಹಾಗೆ ವರ್ತಿಸು. ಯಾರ ಮುಂದೆಯೂ ದುಃಖ ತೋಡಿಕೊಳ್ಳಲು ಹೋಗಬೇಡ. ದುಃಖ ತೋಡಿಕೊಂಡರೆ ಅವರು ನೋಡುವ ರೀತಿಯೇ ಬದಲಾಗುತ್ತದೆ ಎಂದು ತಮ್ಮ ಅಮ್ಮ ಬಾಲ್ಯದಲ್ಲಿ ಹೇಳಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾವು ಬಾಲ್ಯದಲ್ಲಿ ಒಮ್ಮೆ ಅಳುತ್ತಾ ಅಮ್ಮನ ಎದುರು ಹೋದಾಗ ಅಮ್ಮ ಈ ಪಾಠ ಮಾಡಿದ ಬಗ್ಗೆ ನಟಿ ಹೇಳಿದ್ದಾರೆ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಅಮ್ಮನ ಬಳಿ ಹೋಗಿ ದೂರುತ್ತಿದ್ದೆ. ಆಗ ಅಮ್ಮ ಏನೇ ಬಂದರೂ ಯಾರ ಎದುರೂ ಅಳಬೇಡ. ನಿನಗೆ ಬಂದಿರುವುದು ಜಗತ್ತಿನ ಅತಿ ದೊಡ್ಡ ಸಮಸ್ಯೆ ಎಂದು ಅಂದುಕೊಳ್ಳುವೆಯಾ? ಹಾಗೆ ವರ್ತಿಸಬೇಡ ಎಂದು ಪಾಠ ಮಾಡಿರುವುದಾಗಿ ಹೇಳಿದ್ದಾರೆ.  ಆದರೆ ಕೆಲವೊಮ್ಮೆ ಅಳಬೇಕಾಗುತ್ತದೆ, ಅಳುವುದನ್ನು ತಡೆದುಕೊಂಡರೆ ಅದು ಸರಿಯಾದ ಕ್ರಮವಲ್ಲ. ನಿಮ್ಮ ಅಮ್ಮ ಹೇಳಿರುವುದು ತಪ್ಪು ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಇನ್ನು ಕೆಲವು ಕನ್ನಡಿಗರು ನಿಮ್ಮನ್ನು ಕನ್ನಡ ಚಿತ್ರರಂಗದಿಂದ ಬೈಕಾಟ್​  ಮಾಡಿದ್ರೆ ಆಗಲೂ ನೀವು ಅಳಲ್ವೆ ಅಂತ ಪ್ರಶ್ನಿಸಿದ್ದಾರೆ. ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಅನೇಕ ಬಾರಿ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ರಶ್ಮಿಕಾ, ತಮಿಳು ಸಂದರ್ಶನವೊಂದರಲ್ಲಿ ನನಗೆ ಎಲ್ಲಾ ಭಾಷೆಯೂ ಕಷ್ಟ, ಕನ್ನಡ ಕೂಡಾ ಅಷ್ಟೇ ಎಂದಿದ್ದರು. ಬೇರೆ ಸಿನಿಮಾಗಳ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಾಡಿ ಹೊಗಳುವ ರಶ್ಮಿಕಾ, ಕನ್ನಡ ಸಿನಿಮಾಗಳ ಬಗ್ಗೆ ಕಿಂಚಿತ್ತೂ ಮಾತನಾಡುವುದಿಲ್ಲ ಎಂಬ ಆರೋಪ ಇದ್ದು ಕಳೆದ ವರ್ಷ ಇವರನ್ನು ಕನ್ನಡ ಚಿತ್ರರಂಗ ಬೈಕಾಟ್​ ಮಾಡಬೇಕು ಎಂದು ದೊಡ್ಡ ಅಭಿಯಾನವೇ  ಶುರುವಾಗಿತ್ತು. ಅದನ್ನೇ ಈಗ ಟ್ರೋಲಿಗರು ಎಳೆದು ತಂದಿದ್ದಾರೆ.  ಶಾರುಖ್​ ಖಾನ್​ ಜೊತೆ ನಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ! ಏನಿದು ಹೊಸ ವಿಷ್ಯ?

  • 17ನೇ ವಯಸ್ಸಿಗೆ ಸೂಪರ್‌ಸ್ಟಾರ್‌ ನಟಿ, ಕುಟುಂಬಕ್ಕೆ ವಿರುದ್ಧವಾಗಿ ಪ್ರೇಮಿಯ ಕೈಹಿಡಿದು 21 ವರ್ಷಕ್ಕೆ ನಟನೆಗೆ ಗುಡ್‌ಬೈ
    on September 19, 2023 at 8:53 am

    ಇಂದಿಗೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಬಾಲಿವುಡ್‌ನ ಪ್ರಸಿದ್ಧ ಸೂಪರ್‌ ಸ್ಟಾರ್ ನಟಿ,  80 ರ ದಶಕದ ಅತ್ಯಂತ ಜನಪ್ರಿಯ ನಾಯಕಿಯರಲ್ಲಿ  ಒಬ್ಬರಾಗಿರುವ ಈಕೆ ತನ್ನ 7 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ  ಮಾಡಿ,  17 ನೇ ವಯಸ್ಸಿನಲ್ಲಿ ಸೂಪರ್‌ ಹಿಟ್ ನಟಿಯಾದರು. ಆದರೆ  ತಮ್ಮ 21 ನೇ ವಯಸ್ಸಿನಲ್ಲಿ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ವಿವಾಹವಾದರು. ಈಕೆ ಪ್ರಸಿದ್ಧ ಹಾಡುಗಾರ್ತಿ ಕುಟುಂಬದಿಂದ ಬಂದ ನಟಿ ಜೊತೆಗೆ ಸ್ವತಃ ಹಾಡುಗಾರ್ತಿಯಾಗಿದ್ದಾರೆ. ನವೆಂಬರ್ 1, 1965 ರಂದು ಜನಿಸಿದ ಪದ್ಮಿನಿ ಕೊಲ್ಹಾಪುರೆ 80 ರ ದಶಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿರುವ ಇವರು ನೋಡಲು ಸೌಂದರ್ಯವತಿ. ತಮ್ಮ ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ ಪದ್ಮಿನಿ ಕೊಲ್ಹಾಪುರೆ ಅವರು 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.  ಪದ್ಮಿನಿ ಕೊಲ್ಹಾಪುರೆ 80 ರ ದಶಕದ ಅತ್ಯಂತ ಜನಪ್ರಿಯ ನಾಯಕಿಯರಲ್ಲಿ ಒಬ್ಬರಾಗಿದ್ದರು . ಇನ್ಸಾಫ್ ಕಾ ತರಾಜು,  ಆಹಿಸ್ತಾ-ಆಹಿಸ್ತಾ,  ಪ್ಯಾರ್ ಜುಕ್ತಾ ನಹಿ,  ಪ್ರೇಮ್ ರೋಗ್  ಮತ್ತು  ತುಮ್ಸೆ ಮಿಲಾರ್ ನ ಜಾನೆ , ಕ್ಯುನ್  ಮತ್ತು  ಯೇ ಗಲ್ಲಿಯಾನ್ ಯೇ ಚೌಬಾರಾ ನಂತಹ ಹಲವು ಹಿಟ್‌ ಹಾಡುಗಳಿಗೆ ಇವರ ಚಿತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಪದ್ಮಿನಿ ಕೊಲ್ಹಾಪುರೆ ಅವರು ಕೇವಲ 12 ವರ್ಷದವರಾಗಿದ್ದಾಗ ಸೂಪರ್‌ಹಿಟ್ ಚಿತ್ರ ‘ಸತ್ಯಂ ಶಿವಂ ಸುಂದರಂ’ ನಲ್ಲಿ ಕೆಲಸ ಮಾಡಿದರು.  ಪದ್ಮಿನಿ ಕೊಲ್ಹಾಪುರೆ ಮುಂಬೈನ ಮರಾಠಿ ಕುಟುಂಬದಲ್ಲಿ ಜನಿಸಿದರು. 7 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 17 ನೇ ವಯಸ್ಸಿನಲ್ಲಿ ರಿಷಿ ಕಪೂರ್ ಜೊತೆಗಿನ ಅವರ ‘ಪ್ರೇಮ್ ರೋಗ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದು ಸೂಪರ್‌ಹಿಟ್  ಚಿತ್ರ ಎನಿಸಿಕೊಂಡಿತು. ಈ ಚಿತ್ರ ನಟಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.   ಈ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಪದ್ಮಿನಿ ಕೊಲ್ಹಾಪುರೆ  ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. ಪದ್ಮಿನಿ ಕೊಲ್ಹಾಪುರೆಯವರ ತಂದೆ ಪಂಢರಿನಾಥ್ ಅವರು ಪ್ರಸಿದ್ಧ ಶಾಸ್ತ್ರೀಯ ಗಾಯಕರಾಗಿದ್ದರು ಮತ್ತು ವೀಣಾವಾದಕಿ ಮತ್ತು ಪ್ರಸಿದ್ಧ ಗಾಯಕಿಯರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಇವರ ಚಿಕ್ಕಮ್ಮ.    ಪದ್ಮಿನಿ ಕೊಲ್ಹಾಪುರೆ ಅವರು ಬಾಲ್ಯದಿಂದಲೂ ಸಂಗೀತದ ಬಗ್ಗೆ ತುಂಬಾ ಒಲವು ಹೊಂದಿದ್ದರು ಮತ್ತು ತಮ್ಮ ಚಿಕ್ಕಮ್ಮ ಲತಾ ಮಂಗೇಶ್ಕರ್ ಮತ್ತು ಆಶಾ ಬೋಸ್ಲೆ ಅವರಂತೆ ಗಾಯಕಿಯಾಗಲು ಬಯಸಿದ್ದರು. 1973 ರಲ್ಲಿ, ಅವರು ‘ಯಾದೋನ್ ಕಿ ಬಾರಾತ್’ ಚಿತ್ರದಲ್ಲಿ ಅವರ ಸಹೋದರಿ ಶಿವಾಂಗಿಯೊಂದಿಗೆ ಕೋರಸ್‌ನಲ್ಲಿ ಹಾಡಿದರು.   ‘ಕಿತಾಬ್’, ‘ದುಷ್ಮನ್ ದೋಸ್ತ್’, ‘ವಿಧಾತಾ’, ‘ಸಾತ್ ಸಹೇಲಿಯಾನ್’ ಮತ್ತು ‘ಹಮ್ ಇಂತೇಜಾರ್ ಕರೆಂಗೆ’ ಮುಂತಾದ ಚಿತ್ರಗಳಲ್ಲಿ ಪದ್ಮಿನಿ ಹಾಡಿದ್ದಾರೆ.  ಪದ್ಮಿನಿ ಕೊಲ್ಹಾಪುರೆ ಅವರು ತಮ್ಮ 21 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಅಪೇಕ್ಷೆಗೆ ವಿರುದ್ಧವಾಗಿ ಚಲನಚಿತ್ರ ನಿರ್ಮಾಪಕ ಪ್ರದೀಪ್ ಶರ್ಮಾ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಪದ್ಮಿನಿ ತನ್ನ ವೃತ್ತಿಜೀವನದ ಅತ್ಯಂತ ಉತ್ತುಂಗದಲ್ಲಿದ್ದರು. ಇವರ ಮದುವೆ ನಿರ್ಧಾರವು ಚಿತ್ರರಂಗದಲ್ಲಿ ದೊಡ್ಡ ಶಾಕ್‌, ಮತ್ತು ದೊಡ್ಡ ಸುದ್ದಿಯಾಯ್ತು. ಐಸಾ ಪ್ಯಾರ್ ಕಹಾನ್ (1986) ಚಿತ್ರಕ್ಕಾಗಿ ಕೆಲಸ ಮಾಡುವಾಗ ಪದ್ಮಿನಿ ಕೊಲ್ಹಾಪುರೆ ಪ್ರದೀಪ್ ಶರ್ಮಾ ಅಲಿಯಾಸ್ ಟುಟು ಶರ್ಮಾ ಅವರನ್ನು ಭೇಟಿಯಾದರು. ಪದ್ಮಿನಿ ಕೊಲ್ಹಾಪುರೆ ಮತ್ತು ಪ್ರದೀಪ್ ಶರ್ಮಾ ಕೆಲವು ತಿಂಗಳುಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 1986 ರಲ್ಲಿ ವಿವಾಹವಾದರು. ಅವರಿಗೆ ಪ್ರಿಯಾಂಕ್ ಶರ್ಮಾ ಎಂಬ ಮಗನಿದ್ದಾನೆ. 

  • ಕೊನೆಗೂ ಮಂಗಳೂರು ವಿವಿಯಲ್ಲಿ ಗಣೇಶೋತ್ಸವ: ಉಪಕುಲಪತಿಯಿಂದಲೇ ಧಾರ್ಮಿಕ ಕಾರ್ಯ!
    on September 19, 2023 at 8:50 am

    ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು ಮಂಗಳೂರು (ಸೆ.19): ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರು ವಿವಿಯ ಗಣೇಶೋತ್ಸವ ವಿಚಾರ ಕೊನೆಗೂ ಸುಖಾಂತ್ಯ ಕಂಡಿದೆ‌. ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಪ್ರತಿಷ್ಟಾಪನೆ ಮೂಲಕ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ. ಮಂಗಳೂರು ವಿವಿ(Mangaluru University)ಯ ಮಂಗಳಾ ಆಡಿಟೋರಿಯಂನಲ್ಲಿ ನಡೆದ ಗಣೇಶೋತ್ಸ(Ganeshotsav)ವಕ್ಕೆ ಸ್ವತಃ ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಅವರೇ ನೇತೃತ್ವ ವಹಿಸಿ ಶ್ರದ್ಧೆಯಿಂದ ಗಣಪತಿ ಪೂಜೆ ನೆರವೇರಿಸಿದ್ದಾರೆ. ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ: ಕಲ್ಲಡ್ಕ ಪ್ರಭಾಕರ ಭಟ್ ಸವಾಲು!  ಸಕಲ ಧಾರ್ಮಿಕ ವಿಧಿಗಳೊಂದಿಗೆ ಸ್ವತಃ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ ವಿಸಿಗೆ, ವಿವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸ್ಥಳೀಯರು ಸಾಥ್ ನೀಡಿದರು. ಸಣ್ಣ ಗಣೇಶ ಮೂರ್ತಿಗೆ ಪ್ರತಿಷ್ಟಾಪನೆ ಬಳಿಕ ಪೂಜೆ ಸಲ್ಲಿಸಲಾಯಿತು. ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ವಿಸಿ ಜಯರಾಜ್ ಅವರು ಧಾರ್ಮಿಕ ವಿಧಿ ನೆರವೇರಿಸಿದರು.  ಗಣೇಶ ಪ್ರತಿಷ್ಟಾಪನೆ ಬಳಿಕ ವಿವಿ ಆಡಿಟೋರಿಯಂನಲ್ಲಿ ಗಣಹೋಮ ನೆರವೇರಿತು. ಸ್ವತಃ ಗಣಹೋಮದಲ್ಲಿ ಭಾಗಿಯಾದ ಉಪಕುಲಪತಿ ಜಯರಾಜ್ ಅಮೀನ್, ಹೋಮ ಕುಂಡದ ಬಳಿ ಕುಳಿತು ಪೂಜೆಯಲ್ಲಿ ಭಾಗಿಯಾದರು.  ವಿವಿ ಗಣೇಶೋತ್ಸವದಲ್ಲಿ ಭಾಗವಹಿಸಿದ ಕಲ್ಕಡ್ಕ ಭಟ್, ಶಾಸಕ ಭರತ್ ಶೆಟ್ಟಿ! ಮಂಗಳೂರು ವಿವಿ ಗಣೇಶೋತ್ಸವ(Mangaluru university ganeshotsav)ಕ್ಕೆ ಆರ್‌.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್(Kalladka prabhakar bhat) ಆಗಮಿಸಿದ್ದರು‌. ಕಲ್ಲಡ್ಕ ಪ್ರಭಾಕರ ಭಟ್ ಗೆ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಸಾಥ್ ನೀಡಿದ್ರು. ಸ್ಥಳೀಯ ಬಿಜೆಪಿ ಮುಖಂಡರು, ಸಂಘಪರಿವಾರದ ಪ್ರಮುಖರು ಭಾಗಿಯಾದರು. ಗಣಹೋಮದಲ್ಲಿ ಪಾಲ್ಗೊಂಡು ಗಣೇಶನ ದರ್ಶನ ಪಡೆದ‌ ನಾಯಕರು ಮಹಾ ಪೂಜೆ ‌ಬಳಿಕ ಪ್ರಸಾದ ಸ್ವೀಕರಿಸಿದರು. ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಸಹಿತ ಸಿಬ್ಬಂದಿ ಭಾಗಿಯಾಗಿದ್ದು, ಯಾವುದೇ ಗೊಂದಲವಿಲ್ಲದೇ ಗಣಪತಿ ಪೂಜೆ ನೆರವೇರಿದೆ.  ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ: ಕಲ್ಲಡ್ಕ ಭಟ್ ಮಂಗಳೂರು ವಿವಿ ಗಣೇಶೋತ್ಸವ ಬಳಿಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದು, ನಾಲ್ಕೈದು ವರ್ಷಗಳಿಂದ ವಿವಿಯಲ್ಲಿ ಗಣೇಶನ ಪೂಜೆ ಆಗ್ತಿತ್ತು. ಒಂದು ಸ್ವಲ್ಪ ವ್ಯತ್ಯಾಸ ಆದ್ರೂ ಮತ್ತೆ ಇಲ್ಲಿ ವಿನಾಯಕನ ಪೂಜೆ ಆಗಿದೆ. ಈ ವಿಚಾರದಲ್ಲಿ ವಿಸಿ ಜಯರಾಜ್ ಅಮೀನ್ ಮತ್ತು ರಿಜಿಸ್ಟ್ರಾರ್ ರಾಜುಗೆ ನೂರು ನಮನಗಳು. ಯಾವುದೇ ಗೊಂದಲ, ನೋವಾಗದಂತೆ ಜಯರಾಜ್ ಅಮೀನ್ ರೇ ಪೂಜೆಯಲ್ಲಿ ಕೂತಿದ್ದಾರೆ. ಆದರೆ ಇಲ್ಲಿ ಗಣೇಶ ಮೂರ್ತಿ ಸ್ವಲ್ಪ ಸಣ್ಣದಾಗಿದೆ. ಯಕ್ಷಗಾನದ ರೀತಿ ಕಿರೀಟ ಎದುರಿಗಿಟ್ಟು ಪೂಜೆ ಆಗಿದೆ. ಮುಂದಿನ ಬಾರಿ ಕಿರೀಟ ಗಣಪತಿ ತಲೆಯ ಮೇಲೆಯೇ ಇರಲಿ‌‌. ನಮ್ಮ ನಂಬಿಕೆ ಪ್ರಕಾರ ಗಣಪತಿ ಎತ್ತರಕ್ಕೆ ಏರಬೇಕು. ವಿಸಿಯವರ ಸಹಕಾರ ಮತ್ತು ನಂಬಿಕೆ ಭಾರೀ ದೊಡ್ಡದು. ಅವರ ನಂಬಿಕೆ ಮತ್ತು ಸಂಸ್ಕೃತಿಯ ಕಾರಣಕ್ಕೆ ಸುಸೂತ್ರವಾಗಿ ನಡೆದಿದೆ. ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ. ಗಣಪತಿ ಮೇಲೆ ನಂಬಿಕೆ ಇಟ್ಟವರು ಯಾರೂ ವಿರೋಧ ಮಾಡಲ್ಲ. ಈ ದೃಷ್ಟಿಕೋನ ಸರ್ಕಾರದಲ್ಲಿ ನಿತ್ಯ ನಿರಂತರ ಇರಲಿ. ಯಾವುದೇ ಸರ್ಕಾರಗಳು ಬಂದರೂ ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.  ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್: ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿ! ಮಂಗಳೂರು ವಿವಿಗೆ ಹೈ ಸೆಕ್ಯೂರಿಟಿ! ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಇಂದು ಗಣೇಶ ಪ್ರತಿಷ್ಟಾಪನೆ ಹಿನ್ನೆಲೆ ಮಂಗಳೂರು ವಿವಿ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಮಂಗಳಾ ಆಡಿಟೋರಿಯಂ ಎಂಟ್ರಿ ಗೇಟ್ ಸೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಿದ್ದು, ಸರಳ ರೀತಿಯಲ್ಲಿ ಆಡಿಟೋರಿಯಂನಲ್ಲಿ ಗಣೇಶ ಪ್ರತಿಷ್ಟಾಪನೆಗೆ ಆಗಿದೆ. ಮಾವಿನ ಎಲೆ, ಹೂವು ಹಾಗೂ ಬಾಳೆ ಗಿಡ ಬಳಸಿ ಸರಳ‌ ಸಿಂಗಾರ ಮಾಡಿ ಯಾವುದೇ ಬಂಟಿಂಗ್ಸ್, ಬ್ಯಾನರ್ ಬಳಸದೇ ಪ್ರತಿಷ್ಟಾಪನೆ ಮಾಡಲಾಗಿದೆ. ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲೂ ಪೊಲೀಸ್ ಭದ್ರತೆ ಹಾಕಿದ್ದು, ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿತ್ತು.

  • ಕರ್ನಾಟಕ ಜನತೆಗೆ ಮತ್ತೊಂದು ದರ ಏರಿಕೆ ಶಾಕ್‌: ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ಹೆಚ್ಚಳ!
    on September 19, 2023 at 8:33 am

    ಬೆಂಗಳೂರು (ಸೆ.19): ರಾಜ್ಯದ ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಅಂತ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಸ್ತಿ ನೊಂದಣಿ ಮಾರ್ಗಸೂಚಿ ದರ ಏರಿಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ. ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ, ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಅದಕ್ಕಾಗಿ ನಾವು ಆಸ್ತಿ ನೊಂದಣಿ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಅಕ್ಟೋಬರ್ 1ರಿಂದ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು. ಅಭಿನವ ಹಾಲಶ್ರೀ ಸ್ವಾಮೀಜಿ ರೋಚಕ ಟ್ರಾವೆಲ್‌ ಹಿಸ್ಟರಿ: 4 ಹೊಸ ಮೊಬೈಲ್, 4 ಸಿಮ್‌ ಕಾರ್ಡ್‌, 50 ಲಕ್ಷ ರೂ. ಸಮೇತ ಪರಾರಿ ಇನ್ನು ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರವಿರುವ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ದರ ಖಂಡಿತ ಹೆಚ್ಚಳ ಆಗಲಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳಲ್ಲಿ, ವಿಮಾನನಿಲ್ದಾಣಗಳು ನಿರ್ಮಾಣವಾದ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಟಿ ಬಿಟಿ ಕಂಪನಿಗಳು ಸ್ಥಾಪನೆಯಾಗುತ್ತಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ಮಾಹಿತಿ ನೀಡಿದರು. ವಾರ್ಷಿಕ 2000 ಕೋಟಿ ರೂ. ಆದಾಯ ನಿರೀಕ್ಷೆ: ಪ್ರಸ್ತುತವಾಗಿ ರಾಜ್ಯದಲ್ಲಿ ಸರಾಸರಿ ಶೇಕಡಾ 30 ಪರ್ಸೆಂಟ್‌ ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆ ನಂತರ ಪ್ರಕಟ ಆಗಲಿದೆ. ಇನ್ನು ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರಲಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲ ಆಗಲಿದೆ. ಹೊಸದನ್ನು ಮಾಡಿದಾಗ ಪರ ವಿರೋಧ ವ್ಯಕ್ತವಾಗಬಹುದು. ಅದನ್ನು ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಸಚಿವ ಕೃಷ್ಣ ಬೈರೆಗೌಡ ಹೇಳಿದರು. ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ ಪರ ವಿರೋಧ ಇದ್ದೇ ಇರುತ್ತದೆ, 2 ತಿಂಗಳ ಬಳಿಕ ಸರಿ ಹೋಗುತ್ತದೆ: ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ ಅದು 2 ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ‌ಮಾರಾಟದ ವೇಳೆ ಬ್ಲ್ಯಾಕ್ ಮನಿ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು ಎಂಬುದು ನಮ್ಮ ತೀರ್ಮಾನವಾಗಿದೆ. ಹೊಸದು ಮಾಡಿದಾಗ ಪರ- ವಿರೋಧ ಇರಲಿದೆ. ಆದರೆ ಮಾರ್ಗಸೂಚಿ ದರ ಪ್ರತಿವರ್ಷ ಏರಿಕೆ ಮಾಡಬೇಕು ಅಂತ ಕಾಯಿದೆಯಲ್ಲಿ ಇದೆ. ಕಳೆದ 5 ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಆಗಿರಲಿಲ್ಲ. ಅದಕ್ಕೆ ನಾವು ಈಗ ಮಾಡ್ತಾ ಇದ್ದೇವೆ ಎಂದು ತಿಳಿಸಿದರು. 

  • ಮಹಿಳಾ ಮೀಸಲಾತಿ ಮಸೂದೆ : ದೇವೇಗೌಡರ ಕನಸಿಗೆ ಮರುಜೀವ ನೀಡಿದ ಪ್ರಧಾನಿ ಮೋದಿ: ಎಚ್‌ಡಿಕೆ
    on September 19, 2023 at 8:27 am

    ಬೆಂಗಳೂರು (ಸೆ.19): ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿರುವ ಹಿನ್ನೆಲೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಮಹಿಳಾ ಮೀಸಲಾತಿ ನೀಡುವ ವಿಚಾರ ಸಂಬಂಧ ##ಮಹಿಳಾಮೀಸಲಾತಿ #WomenReservationBill ಹ್ಯಾಷ್‌ಟ್ಯಾಗ ಬಳಸಿ ಸುದೀರ್ಘವಾಗಿ ಟ್ವೀಟ್ ಮಾಡಿರುವ ಅವರು,  ಹೆಚ್‌ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೇ 1996 ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಬಿಲ್ ಅನ್ನು ಮಂಡಿಸಲಾಗಿತ್ತು. ಆದರೆ, ಅವರ ಸಂಯುಕ್ತರಂಗ ಸರಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ. ಇವತ್ತು ಕಾಂಗ್ರೆಸ್ಸಿನ I.N.D.I.A. ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯ, ಮಹಿಳಾ ಮೀಸಲಾತಿ ಮಸೂದೆಗೆ ಗ್ರೀನ್ ಸಿಗ್ನಲ್? 27 ವರ್ಷಗಳ ನಂತರ ಮಾನ್ಯ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ನನಗೆ ಸಂತೋಷ ಉಂಟು ಮಾಡಿದೆ ಎಂದಿರುವ ಅವರು, 1995ರಲ್ಲಿ ಮಾನ್ಯ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಅಂದು ನಮ್ಮ ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು. ಇಂದು ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿಗಳ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ, ಮತ್ತವರ ಸಂಪುಟ ಕೈಗೊಂಡ ನಿರ್ಧಾರ ಶ್ಲಾಘನೀಯವಾಗಿದೆ.. ರಾಜಕೀಯಕ್ಕೆ ಅತೀತವಾಗಿ ಈ ಮಸೂದೆಯನ್ನು ಎಲ್ಲಾ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.  ಇಂದಿನಿಂದ ಸಂಸತ್ ವಿಶೇಷ ಅಧಿವೇಶನ: ಹಲವು ಅಚ್ಚರಿಯ ನಿರ್ಧಾರಗಳ ಸಾಧ್ಯತೆ

  • ತೂಕ ಇಳಿಕೆ ಜತೆ ಹೃದಯದ ಆರೋಗ್ಯ ಉತ್ತಮವಾಗಿರಲು ಈ ಆಹಾರ ಸೇವಿಸಿ ಎಂದ ಸಂಶೋಧಕರು!
    on September 19, 2023 at 8:23 am

    ಈ ಆಹಾರದಿಂದ ಜನರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಲ್ಲದೆ, ಅವರ ಕಾರ್ಡಿಯೋ ಮೆಟಾಬಾಲಿಕ್ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ಆಹಾರದ ಬಗ್ಗೆ ಇಲ್ಲಿದೆ ವಿವರ.. ನಿಮ್ಮ ಆರೋಗ್ಯಕ್ಕೆ ಧಕ್ಕೆಯಾಗದಂತೆ ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಲು ಮತ್ತೊಂದು ಅದ್ಭುತವಾದ ಆಹಾರವನ್ನು ಅಧ್ಯಯನವು ಕಂಡುಕೊಂಡಿದೆ. ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಹಾರದಿಂದ ಜನರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಲ್ಲದೆ, ಅವರ ಕಾರ್ಡಿಯೋ ಮೆಟಾಬಾಲಿಕ್ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕಂಡುಕೊಂಡಿದ್ದಾರೆ. ಹಾಗಾದ್ರೆ, ಯಾವುದು ಈ ಆಹಾರ ಅಂತೀರಾ..? ಬಾದಾಮಿ. ಸಂಶೋಧಕರು ಶಕ್ತಿ-ನಿರ್ಬಂಧಿತ ಆಹಾರದಲ್ಲಿ ಬಾದಾಮಿಯ ಪರಿಣಾಮವನ್ನು ಪರಿಶೀಲಿಸಿದ್ದು, ಸುಮಾರು 7 ಕಿಲೋಗಳಷ್ಟು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ. ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ತೊಡಕುಗಳು ಕಾಳ್ಗಿಚ್ಚಿನಂತೆ ಹರಡುತ್ತಿರುವುದರಿಂದ ಅಧ್ಯಯನದ ಸಂಶೋಧನೆಗಳು ಜಾಗತಿಕವಾಗಿ ಪ್ರಸ್ತುತವಾಗಿವೆ.   ಬಾದಾಮಿಯಂತೆ ನಟ್ಸ್‌ನಲ್ಲೂ ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಅಧಿಕವಾಗಿರುತ್ತದೆ ಮತ್ತು ವಿಟಮಿನ್‌ಗಳು ಹಾಗೂ ಖನಿಜಗಳಿಂದ ತುಂಬಿರುತ್ತವೆ. ಆದರೆ ಅವುಗಳು ಹೆಚ್ಚಿನ ಕೊಬ್ಬಿನ ಅಂಶವನ್ನು ಹೊಂದಿರುತ್ತವೆ. ಇದು ಜನರ ತೂಕ ಹೆಚ್ಚಿಸುತ್ತದೆ ಎಂದು ಸಂಶೋಧಕ ಡಾ. ಶರಯಾ ಕಾರ್ಟರ್ ಹೇಳಿದರು. 9 ತಿಂಗಳ ಕಾಲ ಈ ಅಧ್ಯಯನ ನಡೆದಿದ್ದು, 106 ಜನ ಇದರಲ್ಲಿ ಭಾಗವಹಿಸಿದ್ದರು. 9 ತಿಂಗಳ ಪೈಕಿ ತೂಕ ನಷ್ಟಕ್ಕೆ ಮೂರು ತಿಂಗಳ ಶಕ್ತಿ-ನಿರ್ಬಂಧಿತ ಆಹಾರ ಹಾಗೂ ತೂಕ ನಿರ್ವಹಣೆಗಾಗಿ ಆರು ತಿಂಗಳ ಶಕ್ತಿ-ನಿಯಂತ್ರಿತ ಆಹಾರವನ್ನು ಒಳಗೊಂಡಿದೆ. “ಬಾದಾಮಿ ಪೂರಕ ಆಹಾರಗಳು ಕೆಲವು ಹೆಚ್ಚು ಅಥೆರೋಜೆನಿಕ್ ಲಿಪೊಪ್ರೋಟೀನ್ ಸಬ್‌ಫ್ರಾಕ್ಷನ್‌ಗಳಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹ ಬದಲಾವಣೆಗಳನ್ನು ಪ್ರದರ್ಶಿಸಿವೆ. ಇದು ದೀರ್ಘಾವಧಿಯಲ್ಲಿ ಸುಧಾರಿತ ಕಾರ್ಡಿಯೋಮೆಟಾಬಾಲಿಕ್ ಆರೋಗ್ಯಕ್ಕೆ ಕಾರಣವಾಗಬಹುದು” ಎಂದು ಸಂಶೋಧಕರು ಹೇಳಿದ್ದಾರೆ. ಹಲವಾರು ಇತರ ಅಧ್ಯಯನಗಳು ಸಹ ಬಾದಾಮಿ ಮತ್ತು ಆರೋಗ್ಯಕರ ಹೃದಯದ ನಡುವೆ ನಿಕಟ ಸಂಬಂಧವನ್ನು ಕಂಡುಕೊಂಡಿವೆ. ಇದನ್ನು ಇಂಗ್ಲೀಷ್‌ನಲ್ಲಿ almonds ಎಂದು ಕರೆಯಲಾಗುತ್ತದೆ.  ಬಾದಾಮಿಯ ಪೌಷ್ಟಿಕಾಂಶದ ಮೌಲ್ಯ ಹೀಗಿದೆ..  100 ಗ್ರಾಂ ಬಾದಾಮಿಯು ಸುಮಾರು 580 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು 21.15-ಗ್ರಾಂ ಪ್ರೋಟೀನ್, 50 ಗ್ರಾಂ ಕೊಬ್ಬು, 21.55 ಗ್ರಾಂ ಕಾರ್ಬೋಹೈಡ್ರೇಟ್, 12.5 ಗ್ರಾಂ ಫೈಬರ್ ಮತ್ತು 4.35 ಗ್ರಾಂ ಸಕ್ಕರೆಯನ್ನು ಒಳಗೊಂಡಿದೆ. ಬಾದಾಮಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಮ್, ರಂಜಕ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ ಕೂಡ ಸಮೃದ್ಧವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ತಿಳಿಸಿದೆ.   

  • ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ!
    on September 19, 2023 at 8:21 am

    ನವದೆಹಲಿ(ಸೆ.19) ಹಳೇ ಸಂಸತ್ ಭವನಕ್ಕೆ ವಿದಾಯ ಹೇಳಿ ಇದೀಗ ಹೊಸ ಸಂಸತ್ ಭವನದಲ್ಲಿ ಅಧಿವೇಶನ ಆರಂಭಗೊಂಡಿದೆ. ಹೊಸ ಸಂಸತ್ ಭವನದಲ್ಲಿ ಆರಂಭಗೊಂಡ ಮೊದಲ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ಹೊಸ ಸಂಸತ್ ಭವನದ ವಿಶೇಷತೆ, ಸೆಂಗೋಲ್ ಪ್ರತೀಕ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಬಿಲ್ ತರಲು ನಾವು ಬದ್ಧರಾಗಿದ್ದೇವೆ. ಮಹಿಳಾ ಸಬಲೀಕರ, ಮಹಿಳಾ ಸಶಕ್ತಿಕರಣಕ್ಕೆ ಮತ್ತಷ್ಟು ಶಕ್ತಿ ತುಂಬ ಕೆಲಸ ಮಾಡುವ ಅವಕಾಶ ನನಗೆ ಒಲಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಾನೂನು ತರುವುದು ನನಗೆ ಒಲಿದ ಭಾಗ್ಯ ಎಂದು ಮೋದಿ ಹೇಳಿದ್ದಾರೆ. ಹೊಸ ಸಂಸತ ಭವನದ ಮೊದಲ ಅಧಿವೇಶನದ ಈ ಶುಭಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.  ವಿಜ್ಞಾನ ಯುಗದಲ್ಲಿ ಚಂದ್ರಯಾನ3 ಯೋಜನೆ ನಮ್ಮೆಲ್ಲರ ಹೆಮ್ಮೆ ದುಪ್ಪಟ್ಟು ಮಾಡಿದೆ. ಜಿ20 ಶೃಂಗಸಭೆ ಮೂಲಕ ಭಾರತ ವಿಶ್ವಕ್ಕೆ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಕ್ಕಿತ್ತು. ಆಧುನಿಕ ಭಾರತದಲ್ಲಿ ಹೊಸ ಸಂಸತ್ ಭವನದ ಶುಭಾರಂಭವಾಗಿದೆ. ಇಂದು ಗಣೇಶ ಚತುರ್ಥಿಯ ಶುಭದಿನವಾಗಿದೆ.  ಗಣೇಶ ಸಿದ್ಧಿಯ ದೇವರು, ಗಣೇಶ ಸಿದ್ದಿ ವಿದ್ಯೆಯ ದೇವರು. ಈ ಶುಭಸಂದರ್ಭದಲ್ಲಿ ನಮ್ಮ ಸಿದ್ದಿ ಸಂಕಲ್ಪ ಸಾಕಾರಗೊಳ್ಳಲು ಸಹಕಾರಿಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ! ಗಣೇಶ ಚತುರ್ಥಿ ದಿನ ಲೋಕಮಾನ್ಯ ತಿಲಕ ನೆನಪಾಗುತ್ತಿದೆ. ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶೋತ್ಸವವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಸ್ವರಾಜ್ಯ ಸಂಕಲ್ಪವನ್ನು ಮೂಲೆ ಮೂಲೆಗೆ ತಲುಪಿಸಿದರು.  ಸ್ವತಂತ್ರ ಭಾರತದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಪ್ರದಾಯ ನಡೆದುಕೊಂಡು ಬಂದಿದೆ. ಇಂದು ಸಂವತ್ಸರಿಯ ಪರ್ವವಾಗಿದೆ. ಈ ದಿನ ಶ್ರಮವಾಣಿಯ ಪರ್ವ ಎಂದು ಕರೆಯುತ್ತಾರೆ. ಇಂದು ಮಿಚ್ಚಾಮಿ ದುಕುಡೋ ದಿನ. ಮನಸ್ಸು, ಶ್ರಮ, ವಚನ, ಕರ್ಮದ ಮೂಲಕ ಯಾವುದೇ ತಪ್ಪಾಗಿದ್ದರೆ ಕ್ಷಮೇ ಕೇಳುವ ದಿನ ಇಂದಾಗಿದೆ.  ಎಲ್ಲಾ ಸಂಸದರಿಗೆ, ಎಲ್ಲಾ ದೇಶ ಜನತೆಗೆ ಮಿಚ್ಚಾಮಿ ದುಕಡೋ ಎಂದು ಮೋದಿ ಹೇಳಿದ್ದಾರೆ. ಸಂಸತ್ ಭವನ ಹೊಸದು, ಇಲ್ಲಿನ ವ್ಯವಸ್ಥೆ ಹೊಸದು, ಇಲ್ಲಿ ಎಲ್ಲವೂ ಹೊಸದು.  ಸ್ವತಂತ್ರ ಭಾರತದ ಸಾಕ್ಷಿಯಾಗಿರುವ ಸೆಂಗೋಲ್ ಈ ಸಂಸತ್ ಭವನದಲ್ಲಿದೆ. ಈ ಸೆಂಗೋಲ್ ಜವಾಹರ್ ಲಾಲ್ ನೆಹರೂ ಸೆಂಗೋಲ್ ಪಡೆಯುವ ಮೂಲಕ ಬ್ರಿಟಿಷರಿಂದ ಅಧಿಕಾರ ಪಡೆದುಕೊಂಡರು. ತಮಿಳುನಾಡಿನ ಮಹಾನ ಪರಂಪರೆಯಾಗಿರುವ ಸೆಂಗೋಲ್ ದೇಶದ ಏಕೆತೆಯ ಪ್ರತೀಕವಾಗಿದೆ. ಇಂದು ಇದೇ ಸೆಂಗೋಲ್  ಈ ಸಂಸತ್ತಿನಲ್ಲಿದೆ. ಇದಕ್ಕಿಂತ ಗರ್ವದ ವಿಚಾರ  ಏನಿದೆ ಎಂದು ಮೋದಿ ಹೇಳಿದ್ದಾರೆ. ಈ ಭವ್ಯ ಸಂಸತ್ ಭವನ ಕಟ್ಟದ ನಿರ್ಮಾಣಕ್ಕೆ ಶ್ರಮಿಸಿದ ನಮ್ಮ ಎಂಜಿನೀಯರ್, ಅಧಿಕಾರಿಗಲು, ಕಾರ್ಮಿಕರಿಗೆ ನನ್ನ ಅಭಿನಂದನೆಗಳು, ಈ ಕಟ್ಟಡ ನಿರ್ಮಾಣದಲ್ಲಿ 30,000ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದಾರೆ. ಈ ಸದನದಲ್ಲಿ ಡಿಜಿಟಲ್ ಬುಕ್ ಇಡಲಾಗಿದೆ. ಈ ಬುಕ್‌ನಲ್ಲಿ ಸಂಸತ್‌ನ ಸಂಪೂರ್ಣ ಇತಿಹಾಸ ತಿಳಿಯಬಹುದು. 140 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಹೊಸ ಸಂಸತ್ ಭವನದ ಮೂಲಕ ದೇಶದ ಅಭಿೃದ್ಧಿಗೆ ನಾವೆಲ್ಲ ಕೈಜೋಡಿಸಬೇಕಿದೆ ಎಂದರು. ಪಕ್ಷ ಯಾವುದೇ ಇರಬಹುದು, ನಾವೆಲ್ಲ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ, ಖರ್ಗೆ! ಸಂಸತ್ ರಾಷ್ಟ್ರ ಸೇವೆಯ ಸರ್ವೋಚ್ಚ ಸ್ಥಾನ. ಈ ಸಂಸತ್ ಪಕ್ಷಗಳಿಗೆ ಸೀಮಿತವಲ್ಲ. ಈ ಪವಿತ್ರ ಸಂಸತ್ ನಿರ್ಮಾಣ ದೇಶದ ಹಿತಕ್ಕಾಗಿ ಎಂದು ಮೋದಿ ಹೇಳಿದ್ದಾರೆ. ಎಲ್ಲಾ ಸಂಸದರು ಶಾಸನ ಪಾಲನೆ, ಸಂವಿಧಾನ ಗೌರವಕ್ಕೆ ಪಾತ್ರರಾಗುವ ಮೂಲಕ ಕೆಲಸ ಮಾಡಬೇಕಿದೆ. ಚುನಾವಣೆ ಆಗಮಿಸುತ್ತಿದೆ. ಮುಂದಿನ ದಿನದಲ್ಲಿ ಹೊಸ ಸಂಸತ್ ಭವನದ ಆಡಳಿತ ಪಕ್ಷದಲ್ಲಿ ಯಾರು ಇರಬೇಕು, ವಿರೋಧ ಪಕ್ಷದಲ್ಲಿ ಯಾರು ಇರಬೇಕು ಅನ್ನೋದನ್ನು ಜನರು ನಿರ್ಧರಿಸತ್ತಾರೆ ಎಂದು ಮೋದಿ ಹೇಳಿದ್ದಾರೆ. ಸದನದಲ್ಲಿ ನಮ್ಮ ವಿಚಾರ, ವಿಮರ್ಷೆ ಬೇರೆ ಬೇರೆಯಾಗಿರುತ್ತದೆ. ಆದರೆ ನಮ್ಮ ಸಂಕಲ್ಪ ಒಂದೇ. ಮಹಿಳಾ ಸಶಕ್ತಿಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಭಾರತದ ಮಹಿಳಾ ಸಬಲೀಕರಣ ಯೋಜನೆಗೆ ಜಿ20 ಶೃಂಗಸಭೆಯಲ್ಲಿ ಅಭಿನಂದನೆ ವ್ಯಕ್ತವಾಗಿದೆ. ಜನಧನ್ ಯೋಜನೆ, ಮುದ್ರಾ ಯೋಜನೆ ಸೇರದಂತೆ ಹಲವು ಯೋಜನೆಗಳು ಮಹಿಳೆಯರನ್ನು ಸಶಕ್ತಿಕರಣ ಮಾಡಿದೆ. ಪ್ರಧಾನಿ ಅವಾಸ್ ಯೋಜನೆಯಡಿ ಮಹಿಳೆಯರು ಮನೆ ಪಡೆದಿದ್ದಾರೆ. ಪ್ರತಿ ದೇಶದ ಅಭಿವೃದ್ಧಿ ಯಾತ್ರೆಯಲ್ಲಿ ಕೆಲ ಮೈಲಿಗಲ್ಲು ಆಗಮಿಸುತ್ತದೆ. ಇಂದಿನ ದಿನ ನಾವೆಲ್ಲಾ ಹೊಸ ಇತಿಹಾಸ ರಚಿಸಿದ್ದೇವೆ. ಹೊಸ ಸದನದಲ್ಲಿ ಮೊದಲ ಭಾಷಣಧಲ್ಲಿ ನಾನು ವಿಶ್ವಾಸ ಹಾಗೂ ಗರ್ವದಿಂದ ಹೇಳುತ್ತಿದ್ದೇನೆ, ಇಂದಿನ ದಿನ ಇತಿಹಾಸದಲ್ಲಿ ಹೆಸರು ಅಜರಾಮರವಾಗಿರುವ ದಿನವಾಗಿದೆ ಎಂದು ಮೋದಿ ಹೇಳಿದ್ದಾರೆ. ಅಟಲ್ ಸರ್ಕಾರದಲ್ಲಿ ಮಹಿಳಾ ಬಿಲ್ ಮಂಡನೆ ಮಾಡಲಾಗಿದೆ. ಹಲವು ಬಾರಿ ಈ ಮಸೂದೆ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಪವಿತ್ರ ಕೆಲಸ ಮಾಡಲು ನನಗೆ ಅವಕಾಶ ಬಂದಿದೆ. ಈ ದಿನ ಇತಿಹಾಸ ಪುಟದಲ್ಲಿ ದಾಖಲಾದ ದಿನ. ಮಹಿಲಾ ಮೀಸಲಾತಿ ಬಿಲ್ ಮಂಡಿಸುತ್ತಿದ್ದೇನೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಶೇಕಡಾ 33ರಷ್ಟು ಹೆಚ್ಚಿಸುವ ಈ ಮಸೂದೆ ನಮ್ಮದೇಶದ ಮಹಿಳೆಯರಿಗೆ ಮಾತ್ರವಲ್ಲ ಲೋಕತಂತ್ರಕ್ಕೂ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.  ನಾರಿ ಶಕ್ತಿ ಬಂಧನ್ ಮಸೂದೆ ದೇಶದ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಮೋದಿ ಹೇಳಿದ್ದಾರೆ.

  • Family Gangsters: ರಿಯಲ್​ ಹೆಂಡ್ತಿ ಎದುರೇ ರೀಲ್​ ಹೆಂಡ್ತಿ ಭಾಗ್ಯಳ ಹೆಗಲ ಮೇಲೆ ಕೈ- ತಾಂಡವ್ ಪೇಚಾಟ!
    on September 19, 2023 at 8:17 am

    ಸದ್ಯ ತಾಂಡವ್​ ಎಂದರೆ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಕಲರ್ಸ್​ ಕನ್ನಡ ಸೀರಿಯಲ್​ನಲ್ಲಿ ಬರುವ ಭಾಗ್ಯಲಕ್ಷ್ಮಿ ಧಾರಾವಾಹಿ. ಸದಾ ಮುಖವನ್ನು  ಗಂಟಿಕ್ಕಿಕೊಳ್ಳುವ, ಪತ್ನಿ ಭಾಗ್ಯಳನ್ನು  ಹೀಯಾಳಿಸುವ ತಾಂಡವ್​  ಕಣ್ಣಮುಂದೆ ಬರುತ್ತಾನೆ. ಇಷ್ಟವಿಲ್ಲದೇ ಭಾಗ್ಯಳ ಜೊತೆಗಿನ ಮದುವೆ, ಆಕೆ ಹೆಚ್ಚು ಓದಿಲ್ಲ ಎನ್ನುವ ಸಿಡಿಮಿಡಿ, ಇನ್ನೋರ್ವ ಹೆಣ್ಣಿನ ಜೊತೆ ಸಂಬಂಧ, ಭಾಗ್ಯಳನ್ನು ಕಾಲ ಕಸಕ್ಕಿಂತ ಕೀಳಾಗಿ ನೋಡಿಕೊಳ್ಳುವ ಗಂಡನಾಗಿರುವ ತಾಂಡವ್​ನನ್ನು ಕಂಡರೆ ಜನರಿಗೆ ಇನ್ನಿಲ್ಲದ ಕೋಪ. ಇಷ್ಟು ಕೋಪ ಬರುವಂತೆ ವಿಲನ್​ ರೀತಿ ನಡೆದುಕೊಂಡಿರುವ ತಾಂಡವ್​ನ ರಿಯಲ್​ ಹೆಸರು ಸುದರ್ಶನ್‌ ರಂಗಪ್ರಸಾದ್‌. ಹೊರಗಡೆ ಹೋದರೂ ತಾಂಡವ್​ ಎಂದೇ ಸುದರ್ಶನ್​ ಅವರನ್ನು ಕರೆಯುವಷ್ಟು ಇವರು ಜನಪ್ರಿಯರು. ಆದರೆ ಈ ಧಾರಾವಾಹಿಯ ಸಿಡುಕು ಸ್ವಭಾವದಿಂದ ಹೊರಗೆ ಹೋದರೂ ಬೈಯುವವರೇ ಹೆಚ್ಚುಮಂದಿಯಂತೆ. ಆದರೆ ನಿಜ ಜೀವನದಲ್ಲಿ ಹೇಳಬೇಕಿಂದರೆ, ಇವರು  ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌. ಜನರನ್ನು ನಕ್ಕು ನಗಿಸುವಲ್ಲಿ ಪಂಟರು. ಧಾರಾವಾಹಿಯಲ್ಲಿ ಇವರ ಪತ್ನಿಯ ಹೆಸರು ಭಾಗ್ಯ ಆಗಿದ್ದರೆ, ರಿಯಲ್​ ಲೈಫ್​ ಪತ್ನಿ ಹೆಸರು ಸಂಗೀತಾ ಭಟ್​. ಇವರು,  ಅವರು ಕೂಡ ನಟಿಯೇ.  ಇವರು ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ , ದಯವಿಟ್ಟು ಗಮನಿಸಿ, ಕಿಸ್‌ಮತ್‌, ಆದ್ಯ, ರೂಪಾಂತರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.   ತಮಿಳು, ತೆಲುಗಿನಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ಸುದರ್ಶನ್​ ಅವರ ಬಗ್ಗೆ ಹೇಳುವುದಾದರೆ, ಇವರು ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್‌, ಒಂದು ತಂಡ ಕಟ್ಟಿಕೊಂಡು ವೀಕೆಂಡ್‌ಗಳಲ್ಲಿ ಸ್ಟಾಂಪ್‌ ಅಪ್‌ ಕಾಮಿಡಿ ಮೂಲಕ ಜನರನ್ನು ನಗಿಸುತ್ತಿದ್ದರು. ಆದರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ನಂತರ ಅದಕ್ಕೆ ಸಮಯ ಸಿಗದೇ ಧಾರಾವಾಹಿಯಲ್ಲಿಯೇ ಬಿಜಿಯಾಗಿದ್ದಾರೆ.  ‘ಭಾಗ್ಯಲಕ್ಷ್ಮಿ’, ಸುದರ್ಶನ್‌ ಅವರ ಚೊಚ್ಚಲ ಧಾರಾವಾಹಿ ಆಗಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದ್ದಾರೆ. ನೆಗೆಟಿವ್‌ ಪಾತ್ರದ ಮೂಲಕ ಹೆಸರಾಗಿದ್ದಾರೆ.  ಬಸ್​ ನಂಬರ್​ 123… ಡಬಲ್​ ಡೆಕ್ಕರ್​ನಲ್ಲಿ ಖ್ಯಾತ ಕಿರುತೆರೆ ನಟ ಕರಣ್ವೀರ್ ರೋಚಕ ಪ್ರೇಮ್​ ಕಹಾನಿ!   ಸುದರ್ಶನ್​ ಅವರು ಕಲರ್ಸ್​ ಕನ್ನಡದಲ್ಲಿ ಸೃಜನ್​ ಲೋಕೇಶ್​ ಅವರು ನಡೆಸಿಕೊಂಡುವ Family Gangsters ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದಾರೆ. ಈ ಷೋನಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಭಾಗವಹಿಸಿದ್ದಾರೆ. ಕೆಲ ವಾರಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದೀಗ ಗ್ರ್ಯಾಂಡ್​ ಫಿನಾಲೆ ತಲುಪಿದೆ. ಈ ಕಾರ್ಯಕ್ರಮದಲ್ಲಿ ತಾಂಡವ್​ ಪಾತ್ರಧಾರಿ ಸುದರ್ಶನ್​ ಅವರ ನಿಜವಾದ ಪತ್ನಿ ಸಂಗೀತಾ ಅವರನ್ನೂ ಕರೆಸಲಾಗಿತ್ತು. ಒಂದು ಕಡೆ ಧಾರಾವಾಹಿ ಪತ್ನಿ ಭಾಗ್ಯ ಹಾಗೂ ಇನ್ನೊಂದೆಡೆ ನಿಜವಾದ ಪತ್ನಿ ಸಂಗೀತಾ. ಇಬ್ಬರನ್ನೂ ಕರೆಸಿದ್ದ ನಟ ಸೃಜನ್ ಲೋಕೇಶ್​ ಅವರು ರಿಯಲ್​ ಪತ್ನಿಯ ಜೊತೆ ರೀಲ್​ ಪತ್ನಿಯಂತೆ ಹಾಗೂ ರೀಲ್​ ಪತ್ನಿಯ ಜೊತೆ ರಿಯಲ್​ ಪತ್ನಿಯಂತೆ ಆ್ಯಕ್ಟ್​ ಮಾಡಲು ಹೇಳಿದ್ದರು. ಅದಕ್ಕೆ ಸುದರ್ಶನ್​ ಅವರು ಪೇಚಿಗೆ ಸಿಲುಕಿದರು. ಪರಸ್ಪರ ಬೇರೆ ಬೇರೆ ಡೈಲಾಗ್​ ಹೇಳುತ್ತಾ ನಕ್ಕು ನಗಿಸಿದರು. ಇದಕ್ಕೆ ಸುಷ್ಮಾ ಮತ್ತು ಸಂಗೀತಾ ಅವರೂ ಸಕತ್​ ಡೈಲಾಗ್​ ಹೇಳುವ ಮೂಲಕ ಎಲ್ಲರನ್ನೂ ರಂಜಿಸಿದರು. ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ.  ಅಬ್ಬಾ! ಈ ಪಾಪ್​ ಡ್ಯಾನ್ಸರ್​ ನಿಜವಾಗ್ಲೂ ಹಿಟ್ಲರ್​ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್​         View this post on Instagram                       A post shared by Colors Kannada Official (@colorskannadaofficial)

  • ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌
    on September 19, 2023 at 8:15 am

    ಚೆನ್ನೈ: ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ. ಚೆನ್ನೈನ 24 ವರ್ಷದ ರೌಡಿ ಸತ್ಯ (Rowdy Satya) ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್‌ನಲ್ಲಿ (Egmore) ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು  ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್‌ (Mizoram model) ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂದಿತು. ಈ ವಿಚಾರ ಬೆನ್ನತಿದ್ದ  ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್‌ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದು,  ಅಲ್ಲೊಂದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. ಅಲ್ಲದೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.  2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ (Chennai) ಬೇಸಿನ್‌ ಬ್ರಿಡ್ಜ್‌ನ (Chennai Basin Bridge) ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್‌ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ (Sivaraj) ಕೊಲೆಯಲ್ಲಿ ಭಾಗಿಯಾಗಿದ್ದ ವಕೀಲ ಅಖಿಲನ್ ಹಾಗೂ ನಾಯಿ ರಮೇಶ್‌ನನ್ನು ಈಗಾಗಲೇ ಮುಗಿಸಿದ್ದ ಈ ತಂಡದ ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾಯುತ್ತಿತ್ತು.  ಆತ ಬಿಡುಗಡೆಯಾಗುವುದು ತಿಳಿಯುತ್ತಿದ್ದಂತೆ ಈ ಶಿವರಾಜ್‌ ತಂಡ ಆತನನ್ನು ಮುಗಿಸಲು ಪ್ರೇಮದ ಜಾಲವನ್ನು ಹೆಣೆದಿತ್ತು.  ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ ರೌಡಿಗಳು ಹೆಣೆದ ಪ್ರೇಮದ ಜಾಲಕ್ಕೆ ಪ್ರೇಯಸಿಯಾದ ಜೂಲಿ ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ವಿರೋಧಿ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು  ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು.  ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು.. ಕಳೆದ ಸೆಪ್ಟೆಂಬರ್ 8 ರಂದು  ಸತ್ಯನಿಂದ ಕೊಲೆಯಾಗಿದ್ದ ಶಿವರಾಜ್‌ ಹತ್ಯೆಯಾದ ದಿನವಾಗಿದ್ದು, ಅಂದೇ ಶಿವರಾಜ್ ಆಪ್ತರು ಸತ್ಯನ ಹತ್ಯೆಗೆ ಜಾಲ ಹೆಣೆದಿದ್ದರು. ಅಂದು ಜ್ಯೂಲಿ ಸತ್ಯಗೆ ಕರೆ ಮಾಡಿ ಮಾತನಾಡಿದ್ದು, ಇಗ್ಮೋರೆಗೆ ಬರುವಂತೆ ಮನವಿ ಮಾಡಿದ್ದಳು. ಆದರೆ ಸೆಪ್ಟೆಂಬರ್‌ 8 ರಂದು ಬಾರದ ಆತ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರೆಗೆ ಆಗಮಿಸಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿ ಅದಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು.  ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ. 

24X7 ಲೈವ್ ನ್ಯೂಸ್ ಟಿವಿ/ವೆಬ್ ಪೋರ್ಟಲ್/ಲೈವ್ ಆ್ಯಪ್/ಡೈಲಿ ಇ ನ್ಯೂಸ್ ಪೇಪರ್ ಬಹುರಾಷ್ಟ್ರೀಯ ಮತ್ತು ಬಹುಭಾಷಾ ಲೈವ್ ನ್ಯೂಸ್ ಮತ್ತು ಇತ್ತೀಚಿನ ಅಪ್‌ಡೇಟ್‌ಗಳು, ಅಂತಾರಾಷ್ಟ್ರೀಯದಿಂದ ರಾಷ್ಟ್ರೀಯ ಸುದ್ದಿ, ರಾಜಕೀಯದಿಂದ ಸಾಮಾಜಿಕ, ತಾಂತ್ರಿಕ ಮತ್ತು ವ್ಯವಹಾರ, ಕ್ರೀಡಾ ಸುದ್ದಿ, ಸ್ಥಳೀಯದಿಂದ ಜಾಗತಿಕ ನಿಷ್ಪಕ್ಷಪಾತ ಸುದ್ದಿ ಪ್ರಸಾರ. ನಮ್ಮೊಂದಿಗೆ 24X7 ಲೈವ್ ನ್ಯೂಸ್ ಟಿವಿಯಲ್ಲಿ ನವೀಕೃತವಾಗಿರಿ! ನಿಷ್ಪಕ್ಷಪಾತ, ಬೌದ್ಧಿಕ, ಅಂತರರಾಷ್ಟ್ರೀಯ, IOB ಸುದ್ದಿ ನೆಟ್‌ವರ್ಕ್‌ನೊಂದಿಗೆ ನವೀಕರಿಸಿ